‘ನಿಶಾಚಾರಿ ಗೂಬೆಗಳ ಮುಗ್ಧ ಲೋಕದ ಅನಾವರಣ’. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜೀವಸಂಕುಲದ ನಡುವೆ ಅವಿನಾಭಾವ ಸಂಬಂಧವಿತ್ತು. ಗೂಬೆಯ ಕಂಡರೆ ಅಪಶಕುನ ಎನ್ನುವ ನಂಬಿಕೆಯಿದೆ. ಆದರೆ, ತೇಜಸ್ವಿ ಅವರು ಗೂಬೆಯ ವಿವಿಧ ಮುಖಗಳನ್ನು ತಮ್ಮ ಕಲಾಕೃತಿಯಲ್ಲಿ ಬಿಡಿಸಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಜೀವಲೋಕ ಸರಣಿಯ ಅಡಿಯಲ್ಲಿ ಈ ಕಲಾಕೃತಿಗಳ ಪ್ರದರ್ಶನವನ್ನು ಸೆಪ್ಟೆಂಬರ್ 7ರಿಂದ 15ರ ವರೆಗೂ ಏರ್ಪಡಿಸಲಾಗಿದೆ.
ತಾಯಿ ಲೋಕೇಶ್ ಅವರು ಈ ಕಲಾಕೃತಿಗಳ ಚಿತ್ರಗಳನ್ನು ಸೆರೆಹಿಡಿದಿದ್ದು, ಅವುಗಳ ಪ್ರದರ್ಶನವೇ ಇದಾಗಿದೆ.
ತಾಯಿ ಲೋಕೇಶ್
ಒಳ್ಳೆಯ ಪ್ರಯತ್ನ