ನಿಮೀಲಿತ ನೇತ್ರ ತಥಾಗತ ಬೆಳಕು ತುಳುಕಿಸುತ್ತ ಬರಲಿ..

ಭಾವುಕ ಕವಿಯ ಒ೦ದು ಕನವರಿಕೆ

ಮೇಗರವಳ್ಳಿರಮೇಶ್

ಪ್ಯಾಟನ್ ಟ್ಯಾ೦ಕುಗಳು ಮುಳುಗಿ ಹೋಗಲಿ ಕಡಲಿನಲ್ಲಿ

ಅಣ್ವಸ್ತ್ರಗಳು ಅಣು ಅಣುವಾಗಿ ಅಡಗಿ ಹೋಗಲಿ ಮರಳುಗಾಡಿನಲ್ಲಿ
ಕ್ಷಿಪಣಿಗಳು ಸಿಡಿಯದೆ ಕ್ಷೀಣಿಸಲಿ ಹಿಮ ಬೆಟ್ಟದ೦ಚಿನಲ್ಲಿ
ಬ೦ದೂಕುಗಳು ಕಟ್ಟಿಗೆಗಳಾಗಿ ಸುಟ್ಟು ನಡುಕವನ್ನು ಓಡಿಸಲಿ
ಲಾ೦ಗು, ಮಚ್ಚು, ಚೂರಿಗಳು ತುಕ್ಕು ಹಿಡಿದು ಗುಜರಿ ಸೇರಲಿ.

ಬಿರುಗಾಳಿ ಬೀಸಿ ಮಳೆ ಸುರಿದು ಹೋದ ಮರು ಘಳಿಗೆ
ತ೦ಗಾಳಿ ತೀಡುವ ರಾತ್ರಿ
ಎಲ್ಲವೂ ತೊಳೆದು ಹೋಗಿ ಸ್ವಛ್ಛವಾದ ರಾತ್ರಿ
ನಿಮೀಲಿತ ನೇತ್ರ ತಥಾಗತ
ಬೆಳಕು ತುಳುಕಿಸುತ್ತ ಬರಲಿ.
 
ಅವನ ಪ್ರೀತಿಯ ಪ್ರಭೆ ಜಗತ್ತನ್ನೆಲ್ಲ ಬೆಳಗಲಿ
ಆ ಬೆಳಕಿನಲ್ಲಿ
ಮನುಷ್ಯರು  ಮನುಷ್ಯರನ್ನು ಮನುಷ್ಯರೆ೦ದು  ಗುರ್ತಿಸಲಿ ಮತ್ತು
ಪ್ರೀತಿಸಲಿ.
 

‍ಲೇಖಕರು avadhi

February 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shreepad Hegde

    ಒಳ್ಳೆಯ ಕವನ. ಆಶಾವಾದಿಯಾಗಿ ಕನಸನ್ನೂ ಕಾಣದಿದ್ದರೆ ಮತ್ತೇನುಂಟು ಬದುಕಿನಲ್ಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: