ನಿನ್ನೆ ಈ ಚಿತ್ರದಲ್ಲಿ ಮುಖವಾಡ ತೊಟ್ಟಿರುವವರು ಯಾರು? ಎಂಬ ಪ್ರಶ್ನೆ ಕೇಳಿದ್ದೆವು.
ಇಲ್ಲಿದೆ ನೋಡಿ ಉತ್ತರ.
ಅವರೇ ನಮ್ಮೆಲ್ಲರ ಕನ್ನಡ ಕ್ವೀನ್ ಅಪರ್ಣಾ.
ಮೈಸೂರಿನಲ್ಲಿ ಮಂಡ್ಯ ರಮೇಶ್ ಹುಟ್ಟುಹಾಕಿ ಯಶಸ್ವಿಯಾಗಿ ನಡೆಸುತ್ತಿರುವ ನಟನ ತಂಡದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋ ಇದು. ಇದು ಚಾಮಚಲುವೆ ನಾಟಕ ಪ್ರದರ್ಶನ.
ತಕ್ಷಣ ಸರಿ ಉತ್ತರ ನೀಡಿದವರು ರಂಗನಾಥ ಮರಕಿಣಿ
ಅವತ್ತು ಅಪರ್ಣ ಅಲ್ಲಿಗೆ ಆಗಮಿಸಿದ್ದರು.ಅವರ ಹಬ್ಬಿ ಶ್ರೀ ವಸ್ತಾರೆ ಅವರೊಂದಿಗೆ. ನಟನ ರಂಗಶಾಲೆಯ ಮಕ್ಕಳ ನಾಟಕ ಸಿದ್ಧತೆ, ರಂಗ ತರಬೇತಿ, ಅವರು ಹಾಡಿದ ರಂಗಗೀತೆಗಳು ಎಲ್ಲವನ್ನೂ ಕೇಳಿ ಕುಣಿದಾಡುವುದೊಂದೇ ಬಾಕಿ! ರಂಗಶಾಲೆಯ ಆವರಣವನ್ನು ಇಂಚಿಂಚು ಗಮನಿಸಿ ತವರಿಗೆ ಬಂದಂತೆ ಸಂಭ್ರಮಿಸಿದರು.. ಸಂಜೆ ತುಂಬಿದ ಪ್ರೇಕ್ಷಾಂಗಣದ ಮಧ್ಯೆ ಕೂತು ನಮ್ಮ ಜಾನಪದ ನಾಟಕ ಚಾಮಚಲುವೆಯನ್ನು ನೋಡಿ ಅಪಾರ ಸಡಗರಿಸಿದರು.
ಹೋಗುವ ಮುನ್ನ ಅರಳಿದ ಮೊಗದಲ್ಲಿ ಅವರಂದರು “ಎ ನಾನು ನಾಟ್ಕದಲ್ಲಿ ಮಾಡ್ಬೇಕು”
ನಗುತ್ತಾ ನಾನಂದೆ “ನಮಗೆ ನೀವಾಡುವ ಕನ್ನಡ ಕಲಿಸಿ” ಅಂತ!
ಕೊನೆ ಹನಿ: ನೀವು ಫೋಟೋ ಹಾಕಿ ಬರೆದಿರಲ್ಲ ಅದು ದೊಡ್ಡದು..! ಅವಧಿ ಮೇಲಿನ ಅಭಿಮಾನ ಇನ್ನಷ್ಟಾಗಿದೆ.