ನಾ ಸೋಮೇಶ್ವರ ಅವರು ನೆನೆಸಿಕೊಂಡಂತೆ ಬೇಂದ್ರೆ

ನಾ ಸೋಮೇಶ್ವರ್

ಮಡುಗಟ್ಟಿದ ದುಃಖದ ಸನ್ನಿವೇಶಗಳಲ್ಲೂ ಪ್ರಾಸ, ಲಯ, ಶ್ಲೇಷೆಗಳ ಸಾಮರ್ಥ್ಯ ಬಹುಶಃ ಬೇಂದ್ರೆಯಂಥ ಸಹಜ ಕವಿಗಳಿಗಷ್ಟೇ ಸಾಧ್ಯ. 22 ವರ್ಷದ ಮಗ ರಾಮ ತೀರಿಕೊಂಡಾಗ ಅವರ ಸಂಕಟ ಹೇಗಿತ್ತು ನೋಡಿ…

‘ರಾಮ ರಾಮ ಏನು ಆಯಿತೊ ಆಯಿತಾಯಿತು
ನೀನು ಬಂದೆ ಬಂದೆಯಾ
ಏನು ಹೊರಟೆಯಾ ಈಗಲೇ
ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ’.
 
ಇದು ಬೇಂದ್ರೆಯವರ ಸಹಜಸ್ಫುರಣೆಯ ಶಕ್ತಿ. ಇಷ್ಟಾದರೂ ಕವಿಗೆ ಬದುಕಿನ ಬಗ್ಗೆ ಬೇಸರವಿಲ್ಲ.
ಬದಲಾಗಿ ಅದಮ್ಯ ಜೀವನಪ್ರೀತಿ. ‘ಒಂದೇ ಒಂದು ಜನ್ಮದಲಿ/ ಒಂದೇ ಬಾಲ್ಯ ಒಂದೇ ಹರೆಯ/ ನಮಗದಷ್ಟೇ ಏತಕೋ!’ ಎಂದು ನಿಸರ್ಗಕ್ಕೆ ಸವಾಲು ಹಾಕುವ ಚಿರಂತನ ಉತ್ಸಾಹ ಅವರದ್ದು.

***

ಒಮ್ಮೆ ಹುಡುಗಿಯೊಬ್ಬಳು ಬೇಂದ್ರೆಯವರಿಗೆ ‘ಅಜ್ಜಾ ನಾ ಕವಿತೆ ಬರೀಬೇಕಂತ ಅನ್ಕೋತ್ತೀನಿ, ನಾ ಎಷ್ಟು ಕವಿತಾ ಬರದ್ರ ನಾ ಕವಯಿತ್ರಿ ಆಗ್ತೀನಿ!’ ಎಂದಾಗ ಬೇಂದ್ರೆ ಥಟ್ಟನೆ ‘ಅಲ್ಲವಾ, ತಾಯಿಯಾಗಬೇಕಂದ್ರ ಎಷ್ಟು ಮಕ್ಕಳನ್ನು ಹಡೀತಾರವ್ವಾ?’ ಎಂದರು. ಆಕೆಗೆ ಉತ್ತರ ಸಿಕ್ಕಿಬಿಟ್ಟಿತು!

 

‍ಲೇಖಕರು G

February 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lokesh Raj Mayya

    ಎಂಥಾ ಕವಿ ಮನಸ್ಸು…ಈ ರೀತಿಯ ಮನಸ್ಥಿತಿ ಬೇಂದ್ರೇ ಮಾಸ್ತರರಿಗೆ ಮಾತ್ರ ಸಾಧ್ಯ…
    ಧನ್ಯವಾದಗಳು ನಾ.ಸೋಮಶೇಖರ್‍ ರವರಿಗೆ……

    ಪ್ರತಿಕ್ರಿಯೆ
  2. subbanna mattihalli

    ಬೇಂದ್ರೆ ಅಂದರೆ
    ನೋವಿಗೊಂದು ಸಾಂತ್ವನ
    ನೆನಪಿಸುತ್ತಾರೆ ಸಂತನ
    ಅವರ ಸ್ಮರಣ ಚಿರಂತನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: