ತುಳು ಲೋಕಕ್ಕೆ ಡಾ ಇಂದಿರಾ ಹೆಗ್ಗಡೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ತುಳು ಅಕಾಡೆಮಿ ಈ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದೆ.
ಸದ್ದಿಲ್ಲದೇ ತುಳು ಸಾಂಸ್ಕೃತಿಕ ಬದುಕಿನ ಅಧ್ಯಯನ ನಡೆಸಿದ ಹಿರಿಮೆ ಇಂದಿರಾ ಅವರದ್ದು. ಅಷ್ಟೇ ಅಲ್ಲದೆ ಹೊಸ ಮಾಧ್ಯಮಗಳ ಮೂಲಕ ಈ ಸಂಸ್ಕೃತಿಯ ಬನಿಯನ್ನು ಗಡಿಯಾಚೆಗೆ ಕೊಂಡೊಯ್ದಿದ್ದಾರೆ. ‘ಅವಧಿ’ಯ ಆತ್ಮೀಯರೂ, ಬರಹಗಾರರೂ ಆದ ಇಂದಿರಾ ಹೆಗ್ಗಡೆ ಅವರಿಗೆ ಅಭಿನಂದನೆಗಳು.
ಅವರ ಬರಹದ ಪರಿಯನ್ನು ಕಟ್ಟಿಕೊಡುವ ಒಂದು ಲೇಖನ ನಿಮಗಾಗಿ ಇಲ್ಲಿದೆ
ತುಳು ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ತಿಳಿಯ ಬಯಸುವವರು ಇಲ್ಲಿಗೆ ಭೇಟಿ ಕೊಡಿ
“ ಆದರೂ ನಾಯಿಯನ್ನು ಕಟ್ಟಿ ಹಾಕದೆ ಹಾಗೆಯೇ ಬಿಟ್ಟಿದ್ದಾರೆ ಯಾಕೆ?” ಎಂದು ಕೇಳಿದೆ ನಾನು. ಆತ ಮುಂದುವರಿಸಿದ “ನಾಯಿ ಕದಿಯುವ ಕಳ್ಳರ ಭಯ ಇಲ್ಲಿ ಇಲ್ಲ. ನಾಯಿಯನ್ನು ಕದಿಯುವುದು ಮಿಜೋರಾಂನಲ್ಲಿ ಬಹು ದೊಡ್ಡ ಅಪರಾಧ. ನಾಯಿ ಕದ್ದವರಿಗೆ ಜೈಲು ಶಿಕ್ಷೆಯಾಗುತ್ತದೆ. ಚಿನ್ನ ಕದಿಯುವರು ಇರುತ್ತಾರೆ. ಆದರೆ ನಾಯಿ ಕಳ್ಳರು ಇಲ್ಲ. ಯಾರೂ ನಾಯಿಯ ತಂಟೆಗೆ ಬರುವುದಿಲ. ನಾಯಿ ವಿಷಯದಲ್ಲಿ ಕಾನೂನು ಬಿಗಿಯಾಗಿದೆ.”ನಮ್ಮ ಡ್ರೈವರ್ ಸೈನ್ಯಕ್ಕೆ ಸೇರಿ 6 ತಿಂಗಳು ಸೈನ್ಯದಲ್ಲಿ ಇದ್ದು ಮರಳಿದವ. ಆತ ಸೈನಿಕ ತರಬೇತಿ ಮುಗಿಸಿ ಕಾಶ್ಮೀರಕ್ಕೆ ಹೋದಾಗ ನಡೆದ ನಾಯಿ ಮಾಂಸದ ಕಥೆಯನ್ನು ವಿವರಿಸಿದ.
‘ಮಿಜೋರಾಂ ರೆಜಿಮೆಂಟ್’ ಸೈನಿಕ ತರಬೇತಿ ಮುಗಿಸಿ ಯುವಕರನ್ನು ಕಾಶ್ಮೀರಕ್ಕೆ ಕಳುಹಿಸಿತ್ತು. ಈ ರೆಜಿಮೆಂಟ್ನ ಇವರ ತಂಡ ಅಲ್ಲಿಗೆ ಹೋದಾಗ ಕಾಶ್ಮೀರದಲ್ಲಿ ಬೀದಿ ನಾಯಿಯ ಹಾವಳಿ ಇತ್ತು. ಇವರು ಹೋಗಿ ತಿಂಗಳೊಳಗೆ ಬೀದಿನಾಯಿಗಳು ನಿರ್ನಾಮ ಆದುವು. ಆಗ ಸ್ಥಳೀಯರು ತೆಗೆದ ಉದ್ಗಾರ “ನೋಡಲು ಮುಗ್ಧಹುಡುಗರಂತೆ ಕಾಣುವ ಈ ಸುಂದರ ತರುಣರು ಒಂದೂ ನಾಯಿಯನ್ನು ಬಿಟ್ಟಿಲ್ಲವಲ್ಲ?” ಈತ ನಗುತ್ತಾ ವಿವರಿಸಿ. ನಮ್ಮ ಮೊಗದಲ್ಲೂ ನಗು ಲಾಸ್ಯವಾಡಿತು.
‘ನಮಗಂತೂ ಬಹಳ ಮಜಾ ಆಗಿತ್ತು. ದಿನಾ ಹಬ್ಬದೂಟ!’ ಎಂದ ಡ್ರೈವರ್. ಅವನೂ ಆಡುವಾಗ ಅಂದಿನ ಊಟ ಗಮತ್ತು ನೆನೆದೇ ಆತ ಬಾಯಿ ಚಪ್ಪರಿಸುತ್ತಾನೆ ಎಂದೆನಿಸುತ್ತು.
ಅವರವರು ಬಾಲ್ಯದಿಂದ ಯಾವ ಆಹಾರ ಪದ್ಧತಿಯನ್ನು ರೂಢಿಸುತ್ತಾರೋ ಆ ಆಹಾರವೇ ಅವರವರಿಗೆ ತಿನ್ನಲು ಖಷಿಯಾಗುತ್ತದೆ, ಹಿತವಾಗುತ್ತದೆ.
ನಮ್ಮ ಡ್ರೈವರ್ ಮುಂದುವರಿಸಿದ. “ಗೋಮಾಂಸ ನಿಷೇಧ ಹೇರಬೇಕೆಂದು ಭಾರತಲ್ಲಿ ಹೇಳಲಾಗುತ್ತಿದೆ. (ಈಶಾನ್ಯ ಭಾರತೀಯರು ಮಾತನಾಡುವಾಗ ಭಾರತವನ್ನು ಬೇರೆ ಎಂಬಂತೆ ಮಾತನಾಡುತ್ತಾರೆ. ಅದಕ್ಕೆ ಹಿಂದೂಗಳು ಕೊಡುವ ಕಾರಣ ಗೋವು ಹಿಂದುಗಳಿಗೆ ಪೂಜನೀಯ ಎಂದು. ಹಿಂದೂಗಳಿಗೆ ನಾಯಿಯೂ ಪೂಜನೀಯ. ಯಾಕೆಂದರೆ ಅದು ಕಾಳಭೈರವನ ವಾಹನ. ಮೀನು ಪೂಜನೀಯ. ವಿಷ್ಣು ಮತ್ಸ್ಯಾವತಾರಿ. ನಾಥ ಪಂಥದ ಆದಿ ಗುರು ಮತ್ಸೇಂದ್ರನಾಥನ, ಮೀನಿನ ರೂಪದಲ್ಲಿ ಬಂದವ. ಇಲಿ ಗಣೇಶನ ವಾಹನ. ಹಂದಿಯ ರೂಪದಲ್ಲಿ ವಿಷ್ಣು ಮೈದೋರಿದ್ದಾನೆ. ಹುಲಿ, ಚಂಡಿ, ದುರ್ಗೆಯ ವಾಹನ. -ಹೀಗೆ ಹೇಳುತ್ತಾ ಹೋಗಬಹುದು. ಈ ಎಲ್ಲವನ್ನೂ ನಾವು ತಿನ್ನುತ್ತೇವೆ.”
ಅವನ ವಾದ ಸರಿಯಾಗಿತ್ತು.
ಬೆಂಗಳೂರಿಗೆ ಮರಳಿ ಜಾಲತಾಣ ಜಾಲಾಡಿದೆ.
ವಿಶ್ವದಲ್ಲಿ ಒಟ್ಟು ಹನ್ನೊಂದು ದೇಶಗಳಲ್ಲಿ ನಾಯಿ ಮಾಂಸವನ್ನು ಆಹಾರ ರೂಪದಲ್ಲಿ ಸೇವಿಸುತ್ತಾರೆ. ಚೈನಾ, ಇಂಡೋನೇಷಿಯಾ, ಕೊರಿಯಾ, ಮೇಕ್ಸಿಕೋ, ಫಿಲೆಪೈನ್ಸ್, ಥೈವಾನ್, ವಿಯೇಟ್ನಾಮ್, ಆರ್ಟಿಕಾ, ಮತ್ತು ಅಂಟಾರ್ಕಟಿಕಾ ಹಾಗೂ ಸ್ವಿಸರ್ಲ್ಯಾಂಡ್ನ ಎರಡು ಪ್ರದೇಶಗಳಲ್ಲಿ. ಈ ದೇಶಗಳಲ್ಲಿ ನಾಯಿ ಮಾಂಸ ತಿನ್ನುವುದು ಬಹಳ ಪುರಾತನ ಪರಂಪರೆ. ನಾಯಿ ಮಾಂಸ ತಿನ್ನುವ ರಾಷ್ಟ್ರಗಳು ನಾಯಿಯ ಮಾಂಸದಿಂದ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುತ್ತವೆ.
0 ಪ್ರತಿಕ್ರಿಯೆಗಳು