'ನಾನಿನ್ನು ಶಬರಿಯಾಗುತ್ತೇನೆ..' – ಗೋಪಾಲ ವಾಜಪೇಯಿ

ಗೋಪಾಲ ವಾಜಪೇಯಿ

ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ…

‘ಹೂಮಳೆ’ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು.
ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ.
ಅವರ ಮಾತೆಂದರೆ ಹಾಗೆ… ಅದು ಪ್ರೀತಿಯ ಧಾರೆ… ನನಗಂತೂ ಇನ್ನು ಊಟವೇ ಬೇಡವೆನಿಸಿತು.
ಸನದಿಯವರನ್ನು ನಾನು ಮೊದಲ ಸಲ ಭೇಟಿಯಾದದ್ದು 1978ರಲ್ಲಿ. ಮುಂಬಯಿ ಆಕಾಶವಾಣಿಯಲ್ಲಿ. ಆಗವರು ಅಲ್ಲಿ ಉನ್ನತ ಅಧಿಕಾರಿ. ಆದರೆ ಅದಾವುದನ್ನೂ ತಲೆಗೇರಿಸಿಕೊಳ್ಳದೇ ತುಂಬಾ ಆತ್ಮೀಯತೆಯಿಂದ ಮಾತಾಡಿದರು. ಮಧ್ಯಾಹ್ನದ ಊಟಕ್ಕೂ ಕರೆದೊಯ್ದರು. ಕನ್ನಡಿಗರೆಂದರೆ ಅವರಿಗೆ ‘ಮನೆಯ ಜನ.’
ಆಗ ಜತೆಯಾದ ಇನ್ನೊಬ್ಬರೆಂದರೆ ಕನ್ನಡ-ಮರಾಠಿ ಭಾಷಾ ತಜ್ಞ ಡಾ. ಅ. ರಾ. ತೋರೋ ಅವರು.
”ಮುಂದಿನ ಸಲ ಬೆಂಗಳೂರಿಗೆ ಬಂದಾಗ ಮನೆಗೆ ಬರುತ್ತೇನೆ” ಎಂದಿದ್ದಾರೆ ಸನದಿ ಅಣ್ಣ.
ನಾನಿನ್ನು ಶಬರಿಯಾಗುತ್ತೇನೆ.
 

‍ಲೇಖಕರು G

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: