ನವೀನ್ ಸೂರಿಂಜೆ ಬಂಧನವನ್ನು ಪ್ರತಿಭಟಿಸಿ, ಆ ಮೂಲಕ ಪತ್ರಕರ್ತರು ಕೆಲಸ ನಿರ್ವಹಿಸುವುದಕ್ಕೆ ಆತಂಕ ಹುಟ್ಟಿಸುತ್ತಿರುವ ಪ್ರವೃತ್ತಿಯನ್ನು ಖಂಡಿಸಿ ಮೀಡಿಯಾ ವಾಚ್, ಬೆಂಗಳೂರು ಎಂಬ ಮಾಧ್ಯಮ ಚಿಂತಕರ ಸಂಘಟನೆ ಸಂಕಿರಣವನ್ನು ಹಮ್ಮಿಕೊಂಡಿತ್ತು.
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ ಎಸ್ ದಕ್ಷಿಣಾ ಮೂರ್ತಿ, ನ್ಯಾಯವಾದಿ ಆರ್ ನಿತಿನ್ ಹಾಗೂ ವಾಸಂತಿ ಹರಿಪ್ರಕಾಶ್ ಮಾತನಾಡಿದರು. ಹಿರಿಯ ಪತ್ರಕರ್ತರು, ಸಂಘಟನೆಗಳ ಪ್ರಮುಖರು ಹಾಗೂ ಮಾಧ್ಯಮ ವಿದ್ಯಾರ್ಥಿಗಳು ಸಂಕಿರಣದಲ್ಲಿ ಪಾಲ್ಗೊಂಡಿದ್ದರು
ಹೆಚ್ಚಿನ ಫೋಟೋಗಳು ಇಲ್ಲಿವೆ ಕ್ಲಿಕ್ಕಿಸಿ








ಕರ್ನಾಟಕದಲ್ಲಿ ಹೊಸ ಸರ್ಕಾರ ಬರಲಿದೆ . ನೂತನ ಮುಖ್ಯಮಂತ್ರಿ ಮೊದಲು ಸಹಿ ಮಾಡುವ ಫೈಲ್ ನವೀನ ಸುರಂಜೆ ಮೇಲಿನ ಸುಳ್ಳು ಪ್ರಕರಣ ವಾಪಾಸ್ ಪಡೆಯುವುದಾಗಲಿ ಎಂಬುದು ನನ್ನ ಬಯಕೆ. ಹಾಗೆ ಆಗುತ್ತದೆ ಎಂಬ ವಿಶ್ವಾಸ ನನಗಿದೆ .