ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’

ಎಚ್. ಆರ್. ನವೀನ್ ಕುಮಾರ್

**

ದಿನಗಳು ಓಡುತ್ತಿವೆ
ವರ್ಷಗಳು ಉರುಳುತ್ತಿವೆ
ಹೊಸ ವರ್ಷದ ಇಡೀ ಕ್ಯಾಲೆಂಡರ್ ಬದಲಾಯಿಸಿದ್ದೇನೆ, ಪುಟವನ್ನೊಂದೇ ಅಲ್ಲ… ಹೇಳಲಿಕ್ಕೇನೂ
ಹೊಸತು ಕಾಣುತ್ತಿಲ್ಲ.

ಕ್ಯಾಲೆಂಡರ್ ಬದಲಾದ ಕೂಡಲೆ
ಬದುಕು ಬದಲಾದೀತೆ ಮೂರ್ಖ ಎನಬೇಡಿ.
ಅದೇ ಹಳೆಯ ಬವಣೆ, ಕಡುಕಷ್ಟ,
ಬೆಲೆ ಏರಿಕೆಯ ಬರ್ಬರತೆ
ಅದೇ ಅತ್ಯಾಚಾರ, ಹೆಣ್ಮಕ್ಕಳ ಅವಮಾನಿಸುವ ಸುದ್ದಿಗಳು, ಧರ್ಮದ ಹೆಸರಲಿ ನರಮೇಧ,
ಅದೇ ರೈತರ ಆತ್ಮಹತ್ಯೆಯ ಚಿತ್ರಣ
ಎದುರಿಗಿದ್ದೇ ಇದೆ ಎದುರಿಸುವವರಿರುವ ತನಕ.

ಕ್ಯಾಲೆಂಡರ್ ಬದಲಾದರೂ
ಬದುಕು ಮಾತ್ರ ಬದಲಾಗಲೇ ಇಲ್ಲ.
ಹೊಸ ವರ್ಷ ಶುರುವಾತನ್ನೊಮ್ಮೆ ಸಂಭ್ರಮಿಸೋಣ ಎಂದರೆ
ಅದು ಡಿಸೆಂಬರ್ 31 ರ ರಾತ್ರಿ 12 ರ ಗಳಿಗೆಯ ಅರೆಕ್ಷಣದ ಸಂತೋಷ ಮಾತ್ರ.
ಬೆಳಗಾದರೆ ಮತ್ತದೇ ಒತ್ತಡ, ಕೆಲಸ, ಸಾಂಸಾರಿಕ ಜವಾಬ್ದಾರಿ, ಕಿತ್ತು ತಿನ್ನುವ ಸಾಲ, ಬಡತನ, ಮಕ್ಕಳಿಗೆ ಹೊಸ ವರ್ಷಕ್ಕೆ ಸಿಹಿತರಲು ಮತ್ತೆ ಸಾಲದ ಪಾಷಾಣದಲಿ ಸಿಲುಕುವಂತಾಗಿದೆ.

ಇಲ್ಲಿ ಶಾಶ್ವತ ಕ್ಯಾಲೆಂಡರ್ ಒಂದು ಬೇಕಿದೆ
ಬದುಕಿನ ಸಂಕಷ್ಟಗಳ ಬದಲಿಸುವ ಶಾಶ್ವತ ಕ್ಯಾಲೆಂಡರ್ ಬೇಕಿದೆ!

‍ಲೇಖಕರು avadhi

January 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: