ನಡುರೋಡ ಚೌಕಾಶಿ..

ಸತ್ಯಬೋಧ ಜೋಶಿ

ಚಿತ್ರ: ಬಾದಲ್ ನಂಜುಂಡಸ್ವಾಮಿ 

ಹೊಟ್ಟೆ ತಟ್ಟೆಯ ಮಧ್ಯೆ ಇಷ್ಟೊಂದು ಮೈಲುಗಳೆ!!
ಹಸಿವು ರೇಸಿನ ಕುದುರೆ ಗೊತ್ತೆಇರಲಿಲ್ಲ!
ನನಗಿಂತ ಇನ್ನೊಬ್ಬ ಹಸಿದು ಬಂದವನಿಲ್ಲಿ
ಅವನ ಓಟಕೆ ಊರೇ ಸಾಲುತಿಲ್ಲಾ!

ಮುಗಿಲು ದಾಟಿದ ನಿನಗೆ ಹೊಸಿಲು ದಾಟಲು ಭಯವೇ
ಎಷ್ಟು ಬಡ್ಡಿಗೇ ಅವನು ಜೀವ ಬೇಡುತಿಹ
ಸಾವು ಡಾಕ್ಟರಿಗಿಂತ ಬಲು ಅಗ್ಗ ನಂಗೊತ್ತು!
ಚೌಕಾಸಿ ಕುಲಕಸುಬು ಅದಕೆ ಹೊರಟಿರುವೆ

 

ನೂರು ರೊಟ್ಟಿಗಳಗಲ ನಿನ್ನ ಮನೆ ಚಪ್ಪರವು
ನನ್ನ ಕೂಸಿನ ಹೊಟ್ಟೆ ಕಾಸಿನಗಲಾ
ನಿನಗೆ ಹಾರಲು ಮುಗಿಲು ಆಳ ಇಳಿಯಲು ಕಡಲು
ನನ್ನ ಮೇಟಿಯ ಕಣವೇ ಹಂಚಿನಗ !

ನನ್ನನ್ನೇ ನೋಡುತಿದೆ ಹೊರಟಾಗ ಇಡೀ ಶಹರ
ಮದ್ದು ಚುಚ್ಚಿಸಿಬಿಟ್ಟ ಇಲಿಗಳಂತೆ
ಮಸಣ ಒಂದೇ ಹಳತು ದೊಡ್ಡ ನಗರಗಳಲ್ಲಿ
ನಮ್ಮ ಹಾಜರಿ ಲೆಕ್ಕ ಊರಲಂತೆ!

ನಾನೇ ಸವೆದರು ಕೂಡ ಈ ದಾರಿ ಸವೆಯದದು!
ನಿನ್ನ ನೆನೆದನು ಅವ್ವ ರೆಕ್ಕೆ ಬರುತಿಲ್ಲ!
ಕರುಳಿಗಂಟಿದ ಊರು ನಡೆದಂತೆ ಬಲು ದೂರ
ಹೊತ್ತು ಹಾರಲು ಕರೆದೆ ದೇವ್ರೂ ಬರಲಿಲ್ಲ!!

‍ಲೇಖಕರು avadhi

May 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ನಿನಗೆ ಹಾರಲು‌‌ ಮುಗಿಲು ಆಳ ಇಳಿಯಲು‌ ಕಡಲು
    ….
    ನನ್ನನ್ನೇ‌ ನೋಡುತಿದೆ ಶಹರ ,ಮದ್ದು‌ ಚುಚ್ಚಿಟ್ಟ ಇಲಿಗಳಂತೆ….

    ಈ ಸಾಲುಗಳು ಕವಿತೆ ಕಸುವು ಹೆಚ್ಚಿಸಿವೆ.‌ ಭಾರತದ ಶ್ರಮಿಕರ, ಬೆವರು ಸುರಿಸಿ ಉಣ್ಣುವ ಜನರ ಕಷ್ಟಗಳನ್ನು ಸಮರ್ಥವಾಗಿ ಧ್ವನಿಸುತ್ತದೆ ಕವಿತೆ.‌ ಬಾದಲ್ ಅವರ ಚಿತ್ರಕ್ಕೆ ಭಾಷ್ಯ ಬರೆದಂತಿದೆ ….
    ವಾಸ್ತವದ ಕ್ರೂರತೆಗೆ ಕವಿತೆ ಮುಖಾಮುಖಿ ಯಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: