ಕಾಲ ಕವಿತೆ
ರಶ್ಮಿ ಕಾಸರಗೋಡು
ಕೆಂಡದ ಮೇಲೆ ನಡೆದ ಕವಿಯೊಬ್ಬನ
ಕವಿತೆಗಳಲಿ ಬೆಂಕಿಯಂಥಾ ಸಾಲುಗಳು
ಮನಸಿನ ಹೂದೋಟದಲ್ಲಿ
ನಗುವಿನ ಮುಖವಾಡ ಹೊತ್ತ
ನೋವಿನ ಹೂವುಗಳಿಗೆ
ರಕುತದ ಬಣ್ಣವಿದೆ
ನೆತ್ತಿಯಲ್ಲಿ ಧಗಧಗಿಸುವ
ಸೂರ್ಯ, ಬೆವತು ಸೋತು ಹೋದ
ಪದಗಳನ್ನು ಹೆಕ್ಕಿ
ಕುಲುಮೆಯಲ್ಲಿಟ್ಟು ಮತ್ತೊಮ್ಮೆ ಕಾಯಿಸಿ
ಬಡಿದು ಹದ ಬರಿಸಿದ
ಕಾಲ ಚಕ್ರದ ಚರಕದಲ್ಲಿ
ಸುತ್ತುತ್ತಿವೆ ಜೀವನದ
ದಾರಗಳು ಸಿಕ್ಕು ಸಿಕ್ಕಾಗಿ
ಸಮುದ್ರದ ನೀರಿಗಿಂತಲೂ
ಉಪ್ಪುಪ್ಪಿನ ಕಣ್ಣೀರು
ಮೂಕ ವೇದನೆಯ ಸುಳಿಯಲ್ಲಿ
ಸಿಲುಕಿ ಅಲೆಯೆಬ್ಬಿಸಿವೆ
ಎಂದೋ ಬಿತ್ತಿದ ಕವಿತೆಯ ಬೀಜವೊಂದು
ಈಗ ಮೊಳಕೆಯೊಡೆದಿದೆ
ಅವಮಾನದ ನೋವು, ತುಳಿತದ ಬೇನೆಗೆ
ಬಾಗಿದ ಬೆನ್ನು ಹೊಸ ಸೃಷ್ಟಿಯ
ಕಂಡು ತಲೆಯೆತ್ತಿ ನೋಡಿದಾಗ
ನಿರೀಕ್ಷೆಯ ಗಿಡದ ಬುಡಕ್ಕೆ
ಯಜಮಾನನ ನಾಯಿ ಕಾಲೆತ್ತಿ
ಉಚ್ಚೆ ಹೊಯ್ದು ಓಡಿತು.
-ರಶ್ಮಿ ಕಾಸರಗೋಡು
ನೆತ್ತಿಯಲ್ಲಿ ಧಗಧಗಿಸುವ
ಸೂರ್ಯ, ಬೆವತು ಸೋತು ಹೋದ
ಪದಗಳನ್ನು ಹೆಕ್ಕಿ
– ಈ ಸಾಲುಗಳು ಇಷ್ಟವಾದವು .
good one..
yajamaanana naayi kaaletti uchche hoydite?
abba!
teevra samveedaneya anubhaava geeteyantide. antaryadolage ayktha noovide. padya chanaagide. olitaagali.