ಈ ಸಿನಿಮಾದಲ್ಲಿ ಶರ್ಮಿತಾ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿರುತ್ತಾರೆ. ಅದೊಮ್ಮೆ ಒಂದು ಪುಸ್ತಕ ಓದುತ್ತಿರುತ್ತಾರೆ.. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.. ನೆಲದ ಸಂಪೂರ್ಣ ಚಿತ್ರಣ ತೆರೆದುಕೊಳ್ಳುತ್ತದೆ. ಇದನ್ನು ಕಥೆಯ ರೂಪದಲ್ಲಿ ಶರ್ಮಿತಾ ನಿರೂಪಿಸುತ್ತಾ ಸಾಗುತ್ತಾರೆ. ಹೀಗಾಗಿ ಇಡೀ ಸಿನಿಮಾ ಶರ್ಮಿತಾರ ಪಾತ್ರವನ್ನೇ ಕೇಂದ್ರೀಕರಿಸುತ್ತದೆ.
ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿತಾ ಟೀವಿ ನಿರೂಪಣೆಯ ಜೊತೆಯಲ್ಲೇ ಈ ಹಿಂದೆ ರಾಮೋಜಿ ಫಿಲಂಸ್ ನಿರ್ಮಾಣದ ಇಂಗ್ಲಿಷ್ ಕಿರುಚಿತ್ರವೊಂದರಲ್ಲಿ ನಟಿಸಿದ್ದರು. ಅಲ್ಲದೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪರಿಭ್ರಮಣ ಧಾರಾವಾಹಿಯಲ್ಲೂ ಪಾತ್ರ ನಿರ್ವಹಿಸಿದ್ದರು. ತೀರ್ಥಹಳ್ಳಿಯ ತೂದೂರಿನ ಶರ್ಮಿತಾ, ಸಿನಿಮಾದಲ್ಲಿ ಬೆಂಗಳೂರಿನಿಂದ ಮಲೆನಾಡಿಗೆ ಹೋಗುವ ಪಾತ್ರ ನಿರ್ವಹಿಸಿರೋದು ಸ್ಪೆಷಲ್ಲು.
ಇನ್ನುಳಿದಂತೆ, ಸುಬ್ಬು ತಳಬಿ, ಧನಂಜಯ, ಮಂಜು ಪಾಟೀಲ್, ಕೃದನ್ ತೀರ್ಥಹಳ್ಳಿ, ವರ್ಷಾ ಆಚಾರ್ಯ, ಪವಿತ್ರ, ಜಗದೀಶ್ ಬೊಳ್ಳಂದೂರು ಮುಂತಾದವರ ತಾರಾಗಣವಿದೆ.
‘ಹೊಂಬಣ್ಣ’ ಚಿತ್ರದ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನು ರಕ್ಷಿತ್ ತೀರ್ಥಹಳ್ಳಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಕಷ್ಟು ‘ಸೌಂಡ್’ ಮಾಡುತ್ತಿರುವ ವಿನು ಮನಸ್ಸು ಸಂಗೀತ ಸಂಯೋಜಿಸಿರುವ ಒಂದು ಹಾಡನ್ನು ಕೇರಳದಲ್ಲಿ ಚಿತ್ರಿಸಿದ್ದು, ಹೇಮಂತ್, ಅನುರಾಧ ಭಟ್, ಜೋಗಿ ಸುನಿತಾ, ವಾಣಿ ಹರಿಕೃಷ್ಣ, ಮಾನಸ ಹೊಳ್ಳ, ಸಂತೋಷ್ ವೆಂಕಿ, ಅನನ್ಯ ಭಗತ್ ಹಾಗು ಚಂದನ್ ಶೆಟ್ಟಿ ಚಿತ್ರದ ಇನ್ನುಳಿದ ೭ ಹಾಡುಗಳಿಗೆ ದನಿಯಾಗಿದ್ದಾರೆ..
0 ಪ್ರತಿಕ್ರಿಯೆಗಳು