
ಧಾರವಾಡ ಎಂದರೆ ಬೇಂದ್ರೆ, ಧಾರವಾಡ ಎಂದರೆ ಜ್ಞಾನಪೀಠ, ಧಾರವಾಡ ಎಂದರೆ ವಾಮನ ಬೇಂದ್ರೆ
ಧಾರವಾಡ ಎಂದರೆ ಬಸಪ್ಪ ಖಾನಾವಳಿ, ಧಾರವಾಡ ಅಂದರೆ ಬೆಣ್ಣೆ ಗುಲ್ಕನ್, ಧಾರವಾಡ ಎಂದರೆ ಕಲರವದ ಸಂತೆ
ಈ ಎಲ್ಲವನ್ನೂ ಹಿಡಿದಿಟ್ಟಿದ್ದಾರೆ ಕಿರಣ್ ಎಂ ಗಾಜನೂರು








ಧಾರವಾಡ ಎಂದರೆ ಬೇಂದ್ರೆ, ಧಾರವಾಡ ಎಂದರೆ ಜ್ಞಾನಪೀಠ, ಧಾರವಾಡ ಎಂದರೆ ವಾಮನ ಬೇಂದ್ರೆ
ಧಾರವಾಡ ಎಂದರೆ ಬಸಪ್ಪ ಖಾನಾವಳಿ, ಧಾರವಾಡ ಅಂದರೆ ಬೆಣ್ಣೆ ಗುಲ್ಕನ್, ಧಾರವಾಡ ಎಂದರೆ ಕಲರವದ ಸಂತೆ
ಈ ಎಲ್ಲವನ್ನೂ ಹಿಡಿದಿಟ್ಟಿದ್ದಾರೆ ಕಿರಣ್ ಎಂ ಗಾಜನೂರು







ಧಾರವಾಡದ ಪೇಡಾ ಯಾಕೆ ಬಿಟ್ಟಿದ್ದು?
kanavali thatteyalli hasiru Peda… Mukya beediyalli Mishra Peda….
ಧಾರವಾಡ ಕರ್ನಾಟಕವಿಶ್ವವಿದ್ಯಾಲಯ ಎಂದರೆ ನನ್ನ ಸ್ನಾತಕೋತ್ತರ ಪದವಿಯ ಸಾಧನೆಯ ಮೆಟ್ಟಿಲು. ನಾನು ಇದ್ದದ್ದು ಎಮ್ಮಿಕೆರಿ, ಮಾಳಮಡ್ಡಿಯಲ್ಲಿ. ಅಲ್ಲಿ ಪಾಟೀಲರ ಮನೆಯ ಒಂದು ಬಾಡಿಗೆ ಕೋಣೆಯಲ್ಲಿ ನಮ್ಮ ವಾಸ. ಹತ್ತಿರವೆ ಬಸಪ್ಪ ಖಾನಾವಳಿ. ಕ್ಲಾಸಿಗೆ ಹೋಗುವಾಗ ರೊಟಿಯೆರಡು ತಿಂದು, ಗುರೆಳ್ಳು ಚಟ್ನಿಪುಡಿ, ಜುಣುಕ, ಮುಳುಗಾಇ ಮಸಾಲೆ ತುಂಬಿದ ಬದನೆಕಾಇ ಪಲ, ಗುರೆಳ್ಳು ಚಟ್ನಿಪುಡಿಗೆ ಮೊಸರು ಹಾಕಿ ರೊಟಿ ಜಗಿಯುವಾಗ, ಪಕ್ಕದಲ್ಲಿ ಸನಿಹದಲ್ಲಿಯೇ ಹಿಂದುಸ್ತಾನಿ ಕಿರಾಣಾ ಘರಾಣೆಯ ಪಂಡಿತ್ ಬಸವರಾಜರಾಜಗುರು. ಅವರ ಶಿಷ್ಯ ಪಂಡಿತ್ ಗಣಪತಿ ಭಟ್ಟರು ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೆಯವರೆಗೆ ಕ್ಲಾಸ್ ಮೇಟ್. ಅವನ ಸಂಗೀತ ಅಭ್ಯಾಸ. ಮೊಡಕಾ ಬಜಾರ್ ಒಂದಿತ್ತು ಅಲ್ಲಿ. ನಾವು ನಿತ್ಯ ಯುನಿವರ್ಸಿಟಿಗೆ ನಡೆದ್ಕೊಂಡೇ ಹೋಗಬೇಕಾದ ಅನಿವಾರ್ಯತೆ ಆಗಿತ್ತು. ಡಾ ನಾಯಕ್ ಅವರು ಇಂಗ್ಲೀಶ್ ವಿಭಾಗದ ಮುಖ್ಯಸ್ಥರು. ಚಂಪಾ, ಡಾ. ಶಾಂತಿನಾಥ ದೇಸಾಯಿ. ಡಾ ಶಂಕರ್ ಮೊಕಾಶಿ ಪುಣೇಕರ್ ಮುಂತಾದವರೆಲ್ಲ ನನ್ನ ಪ್ರೊಫೆಸ್ಸರ್ ಆಗಿದ್ದರು. ಒಮ್ಮೆ ನಮ್ಮ ಹಿರಿಯ ಮಿತ್ರ ನವರತ್ನ ಎನ್ನುವವರೊಟ್ಟಿಗೆ ಡಾ ಬೇಂದ್ರೆಯವರ ಸಾದನಕೇರಿಗೆ ಅವರ ಶ್ರೀಮಾತಾ ಮನೆಗೆ ಹೋಗಿದ್ದೆ. ಆಗ ನವರತ್ನರಿಗೂ ಬೇಂದ್ರೆಅವರಿಗೂ ವಾದ-ವಿವಾದ ನನ್ನ ಮುಂದೆ ನಡೆಯಿತು ಪುಣಕ್ಕೆ ಬೇಂದ್ರೆಯವರು ತಾಳ್ಮೆ ಕಳೆದುಕೊಂಡು ನಮ್ಮನ್ನು ನಡೆಯಾಚೆ ಎನ್ನಲಿಲ್ಲ.. ಅವರ ಮನೆಯ ಚಾ ಕುಡಿದ ಅಮಲು ಇನ್ನೂ ಇಳಿದಿಲ್ಲ, ಮತ್ತೆ ಮನೋಹರ ಗ್ರಂಥ ಮಾಲೆ, ಚಂಪಾರ ಟಿಂಗರ ಬುಡ್ಡಣ್ಣಾ, ನಾಟಕ, ಪಿ ಲಂಕೇಶ್ ಅವರು ಬಂಡಾಯ ಸಾಹಿತ್ಯ ಚಳುವಳಿಗೆ ಮೆನಿಫೆಸ್ಟೋ ಬರೆಯಲು ದಾರವಾಡಕ್ಕೆ ನಮ್ಮ ಯುನಿವರ್ಸಿಟಿಗೆ ಬಂದಿದ್ದು, ಗೋಪಾಲಕೃಶ್ಣ ಅಡಿಗರು ನಮ್ಮಲ್ಲಿ ಬಂದು ಉಪನ್ಯಾಸ ಮಾಡಿದ್ದು ಮೂಕರಾಜ್ ಆನಂದ್ ಎಂಬ ಇಂಗ್ಲಿಷ್ ಕಾದಂಬರಿಕಾರ ನಮ್ಮಲ್ಲಿಗೆ ಬಂದದ್ದು. ಡಾ ಅರ್ಮಾಂಡೋ ಮಾನೇಜಸ್ ಎಂಬ ನಮ್ಮ ಗುರುಗಳೊಂದಿಗೆ ಚರ್ಚಿಸಿದ್ದು ಎಲ್ಲ ನೆನಪಾಗುತ್ತಿದೆ. ಬರೆಯಲು ಧಾರವಾಡದ ಬಗ್ಗೆ ತುಂಬ ವಿಷಯವಿದೆ.
inno swalpa baredre chennagittu. Kannada kaagunitada tappu saripadisabeku
Bareeta hogree
Dharwada andre modalindloo ista eega Harsha Dhoolkheda na parichaya admele Dharwada da mele preeti bandhavya hechhagjde