“ಮೋದಿಯವರು ನಕಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅಸಲಿ ಗೋರಕ್ಷಕರು ಯಾರು..?
ಹಾಲು ಕುಡಿಯೋರು, ಬೆಣ್ಣೆ ತಿನ್ನೋರು, ತುಪ್ಪ ಸವಿಯೋರು., ದನದ ಸೆಗಣಿ, ಗಂಜಲವನ್ನು ಔಷಧಿ ಎಂದು ಸೇವಿಸೋರು..!!?
ಇವರಂತೂ ಖಂಡಿತ ಅಲ್ಲ.
ಚಳಿ,ಮಳೆ,ಬಿಸಿಲೆನ್ನದೆ ಗೋವುಗಳನ್ನು ಮೇಯಿಸಿ ಕಾಪಾಡುವ ದನಗಾಹಿಗಳೇ ಅಸಲಿ ಗೋರಕ್ಷಕರು’
‘ಗೊರಕ್ಷಣೆ ಕುರಿತಂತೆ ಮೋದಿಯವರ ಇತ್ತೀಚಿನ ಹೇಳಿಕೆಗಳು ಬ್ರಾಹ್ಮಣರ ಪಾರಮ್ಯದ ಆರೆಸ್ಸಸ್ ಮತ್ತು ಶೂದ್ರ ಪ್ರಾಬಲ್ಯದ ಬಜರಂಗ ದಳದ ನಡುವೆ ಅಂತರವನ್ನು/ಪ್ರತ್ಯೇಕತೆಯನ್ನು ಕಾಪಾಡುವ ತಂತ್ರವೂ ಆಗಿರಬಹುದಲ್ಲ..?
ತಿಳಿದೋ ತಿಳಿಯದೆಯೋ ಮನುಷ್ಯ ಕೇವಲ ಆಂತರಿಕ ಬೌದ್ದಿಕತೆ ಕೊರತೆಯಿಂದ ಬಳಲುತ್ತಿದ್ದಾನೆ ,ಜಾಣ ಕುರುಡ ಜಾಣ ಮೂಕನಾಗಿದ್ದಾನೆ,ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ ಅದರ ಅರ್ಥ ವ್ಯರ್ಥ ವಾಗುತ್ತಿದೆ, ಪ್ರತಿಯೊಬ್ಬ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಅರ್ಥಗಳು ಅನರ್ಥಗಳಾಗುತ್ತಿವೆ,ಹಚ್ಚಿದ ಬೆಂಕಿ ದೀಪದಬೆಳಕಾಗುತ್ತಿಲ್ಲಾ ದೀಪವನ್ನೇ ಮುರುಟಿಸಲು ಸಜ್ಜಾಗಿದೆ,