ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ…

ಮುರಳೀಧರ ಉಪಾಧ್ಯ

ಉಡುಪಿಗೆ ’ ಎದೆಗೆ ಬಿದ್ದ ಅಕ್ಷರ ’ ಕ್ಕೆ ಇನಾಂದರ್ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬರಲು ದೇವನೂರು ಮಹಾದೇವರು ಮೊದಲು ಒಪ್ಪಲಿಲ್ಲ . ಎರಡು ಬಾರಿ ಕಾರ್ಯಕ್ರಮ ಮುಂದೂಡಬೇಕಾಯಿತು . ೧೩-೭-೨೦೧೩ ಎಮ್.ಜಿ. ಎಮ್ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಎನಾಂದಾರ್ ಪ್ರಶಸ್ತಿ ಸ್ವೀಕರಿಸಿ ದೇವನೂರು, ಬೆಂಗಳೂರಿನಲ್ಲಿ ಆರಂಭವಾಗಲಿರುವ ಜಾತಿ ಟೌನ್ ಶಿಪ್ ಗಳ ಕುರಿತು ’ಉರಿಯ ನಾಲಗೆ’ಯಿಂದ ಮಾತನಾಡಿದರು. ಅವರ ಭಾಷಣದ ಆಡಿಯೊ ನನ್ನ ಬ್ಲಾಗ್ನ್ ನಲ್ಲಿ ಪ್ರಕಟವಾಗಿದೆ. ’ಅವಧಿ’ ಯಲ್ಲೂ ಇದರ ಲಿಂಕ್ ಪ್ರಕಟವಾಗಿದೆ . ಅಂತರ್ಜಾಲದಲ್ಲಿ ೫೫೦ ಮಂದಿ ಈ ಭಾಷಣ ಕೇಳಿದ್ದಾರೆ. ಜೈ ಮಹಾದೇವ!

ಎಮ್. ಜಿ. ಎಮ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ದೇವನೂರು ನಮ್ಮ ನಾಡಿನಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಯನ್ನು ಕುರಿತು ಮಾತನಾಡಿದರು . ಚರ್ಚೆಯಲ್ಲಿ ಭಾಗವಹಿಸಿದ ಉಪನ್ಯಾಸಕರೊಬ್ಬರು, ಒಬ್ಬರು ಸ್ವಾಮೀಜಿ ಫ಼ೇಸ್ ಬುಕ್ ನಲ್ಲಿ ಮಾರ್ಗದರ್ಶನ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು. ಆಗ ’ಹೌದಾ , ಸ್ವಾಮಿಗಳು ಫ಼ೇಸ್ ಬುಕ್ ನಲ್ಲಿ ಇದ್ದಾರಾ ? ನಾನೂ ಫ಼ೇಸ್ ಬುಕ್ ಗೆ ಬರ್ತೇನೆ ” ಎಂದರು . ದೇವನೂರು ಫ಼ೇಸ್ ಬುಕ್ ಗೆ ಬರ್ತಾರಾ ? ಕಾದು ನೋಡಿ.
 

‍ಲೇಖಕರು G

July 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸುದೀಪ್.ಬಿ.ಎಸ್

    ದೇವನೂರು ಫೇಸ್ ಬುಕ್ ಗೆ ಎಂಟ್ರಿ ಕೊಟ್ರೆ,,ಫೇಸ್ ಬುಕ್ ನ ಫೇಸ್ ಚೇಂಜ್ ಆಗಬಹುದು.. ಜೊತಗೆ ‘ಅವಳಿ’ ಅವರಿಗೂ ಯೋಚನೆ ಉಂಟಾಗಬಹುದು. ಬೇಗ ಬನ್ನಿ ಸರ್…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: