ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು
ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ. ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ. ನಮ್ಮ ಅವರ ನಡುವಿನ ಸಂಬಂಧ,ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ.

ಸಂಪೂರ್ಣ ಓದಿಗೆ ಭೇಟಿ ಕೊಡಿ : ಮೌನ ಕಣಿವೆ
+++
ಅಚ್ಚಾಗದ ಹೆಜ್ಜೆಗಳು
ಬೆರಳಲ್ಲಿ ಬೆರಳ ಬೆಸೆದು
ಫುಟ್ಪಾತಿನ ಬಾರ್ಡರ್ ಟ್ರೀಗುಂಟ
ಹೆಜ್ಜೆ ಹಾಕುವುದೆಂದರೆ
ಅವನಿಗಿಷ್ಟ.
ಹೊಂಬಣ್ಣಕ್ಕೆ ಕಣ್ಣರಳಿಸಿ,
ಹಸಿರ ಕುಡಿ ಸವರಿ,
ಇಬ್ಬನಿಗೆ ತುದಿಬೆರಳ
ತಾಕಿಸುವುದರಲ್ಲೇ
ಅವನಿಗೆ ಎಳೆಎಳೆ ಖುಷಿ.

ಸಂಪೂರ್ಣ ಓದಿಗೆ ಭೇಟಿ ಕೊಡಿ : ಆಲಾಪ





0 Comments