ತ.ರಾ.ಸು ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು

User comments

ನನ್ನ ಮಗ ಕನ್ನಡ ಪುಸ್ತಕಗಳನ್ನು ಓದಲಿ ಅನ್ನೋದು ನನಗೆ ಇದ್ದ ಏಕೈಕ ಆಸೆ. ಅದಕ್ಕಾಗಿ ಪಠ್ಯ ಪುಸ್ತಕದ ಜೊತೆಗೆ ಕಥೆ ಕಾದಂಬರಿ ಓದುವ ಅಭ್ಯಾಸ ಕಲಿಸಿದೆ.

ಚಿತ್ರದುರ್ಗ ಅವನಿಗೆ ಅಜ್ಜನ ಮನೆ. ಅಲ್ಲಿನ ಕೋಟೆ ಹತ್ತೋದು ಮೆಚ್ಚಿನ ಹವ್ಯಾಸ.

ಹೀಗಾಗಿ ತ.ರಾ.ಸು ಚಿತ್ರದುರ್ಗದ ಬಗ್ಗೆ ಬರೆದ ಕಂಬನಿ ಕೊಯಿಲು, ರಕ್ತರಾತ್ರಿ, ತಿರುಗುಬಾಣ ಎಲ್ಲವನ್ನೂ ಚಪ್ಪರಿಸಿಕೊಂಡು ಓದಿದ. ಹುಲ್ಲೂರು ಶ್ರೀನಿವಾಸ ಜೊಯಿಸ ಪಾಳೆಗಾರರ ಕಥೆಗಳನ್ನು ಓದಿದ. ಈ ಹಸಿವು ದುರ್ಗಾಸ್ತಮಾನ ಓದಬೇಕು ಅನ್ನೋ ಆಸೆಗೆ ಬಂದು ನಿಂತಿತು.

ದೊಡ್ಡ ಕಾದಂಬರಿ ಅಂತ ನಾನು ಹಿಂಜರಿದೆ. ಆದರೆ ಅವರ ಚಿಕ್ಕಪ್ಪ ಕೊಡಿಸಿಯೇ ಬಿಟ್ಟರು. ಮೂರು ಹಗಲು ರಾತ್ರಿ ನಿದ್ದೆಗೆಟ್ಟು ಓದಿದ. ಕಣ್ಣ ತುಂಬ ಮದಕರಿ ನಾಯಕನೇ ಆ ಗುಂಗಿನಿಂದ ಹೊರಗೆ ಬರಲು ಅವನಿಗೆ ವರ್ಷವೇ ಬೇಕಾಯಿತು

ನನ್ನ ಮಗ ಎನ್.ಎಸ್.ಭರತನ ಕೈಯಲ್ಲಿ ದುರ್ಗಾಸ್ತಮಾನ ಇರೋ ಚಿತ್ರ ಇಲ್ಲಿದೆ.. ತ.ರಾ.ಸು ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು
-ಎನ್.ಎಸ್.ಶ್ರೀಧರ ಮೂರ್ತಿ

‍ಲೇಖಕರು Admin

January 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶಮ, ನಂದಿಬೆಟ್ಟ

    ಇದು ನಾನು ಪದೇ ಪದೇ ಓದುವ ಮತ್ತು ನನ್ನನ್ನು ಯಾವತ್ತೂ ಕಾಡುವ ಪುಸ್ತಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: