ತೇಜಸ್ವಿ ಪತ್ರ!

ಸುರೇಶ್ ಕಂಜರ್ಪಣೆ 

 

 

 

ನಾನು ಕೆಲಸ ಬಿಟ್ಟು ಊರು ಸೇರಿ ಸಾವಯವ ಪ್ರಯೋಗಕ್ಕೆ ಇಳಿದು ಸಾಲ ಮೈಮೇಲೆ ಎಳಕೊಂಡಾಗ ತೇಜಸ್ವಿಯವರು ಬರೆದ ಪತ್ರ!!!

ಓದಲು ಕಷ್ಟವಾದರೆ ಅಂತ ಪತ್ರ ಇಲ್ಲಿ ಟೈಪು ಮಾಡಿದ್ದೇನೆ.

” ಅಯ್ಯಾ ಮಹಾನುಭಾವಾ,ನಿನ್ನ ತೋಟದ ಕೆಲಸ ಕೇಳಿ ಆಶ್ಚರ್ಯ ಆಯಿತು. ಮೊದಲನೆಯದಾಗಿ ಯಾರು ನಿನಗೆ ತೋಟಕ್ಕೆ ಹೊಗಿ ತಿದ್ದುವ ತಲೆಹರಟೆ ಕೆಲಸ ಮಾಡು ಅಂದಿದ್ದು. ಉತ್ಪಾದನೆಗೆ ತೊಂದರೆ ಕೊಡುವಂಥಾ ಪ್ರತಿಕೂಲ ಪರಿಸ್ಥಿತಿಯನ್ನು ಕೊಂಚ ನಿವಾರಿಸಿ ತಾಳ್ಮೆಯಿಂದ ಕೊಂಚ ದಿನ ಕಾಯಿ, ಅಷ್ಟರ ವಳಗೆ ಗಡಿಬಿಡಿ ಮಾಡಿ ಬೇವಿನ ಎಣ್ಣೆ ಇತ್ಯಾದಿಗಳನ್ನು ಯಾಕೆ ಸಿಂಪಡಿಸುತ್ತೀಯಾ

ಇನ್ನು ಸಾಲದ ಚಿಂತೆ ಬಗ್ಗೆ. ಇದಂತೂ ಮೂರ್ಖತನದ ಪರಮಾವಧಿ. ಯಾಕೆಂದರೆ ಇದು ಕೊಟ್ಟವರಿಗೆ ಇರಬೇಕಾದ್ದೇ ಹೊರತು ತಗೊಂಡವರಿಗಲ್ಲ.. ಸಾಲ ವಿಮುಕ್ತಿ ಆಗದಿದ್ದರೂ ಅದರ ಚಿಂತೆಯಿಂದಾದರೂ ವಿಮುಕ್ತನಾಗಯ್ಯಾ”

ನನ್ನ ಬದುಕಿನ ಸಾಹಸಗಳಲ್ಲಿ URA ಮತ್ತು ತೇಜಸ್ವಿ ನನ್ನ ಬಗ್ಗೆ ತೆಗೆದುಕೊಂಡ ಕಾಳಜಿ ನನ್ನ ಭಾಗ್ಯ ವಿಶೇಷ.

ಕೃಷಿ ಬಗ್ಗೆ ಅನುಸರಿಸಬೇಕಾದ ಕಾಮನ್ ಸೆನ್ಸ್ ನ್ನು ಇಂದಿಗೂ ನಾನು ಪಂಡಿತರಿಗಿಂತ ಚೆನ್ನಾಗಿ ವಿವರಿಸಬಲ್ಲೆ. ಅದು ತೇಜಸ್ವಿಯವರ ಶಿಷ್ಯತ್ವದಿಂದ ಲಭಿಸಿದ್ದು.

 

‍ಲೇಖಕರು avadhi

September 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Raj

    Dayavittu neevu Thoota madidda bagge bareyiri… Naavu krushi madbeku andukondavari upayoga agutte. Dhanyavadagalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: