ಅಭಿವೃದ್ಧಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಕೃತಿ ‘ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ’ ಕೃತಿ ತುಮಕೂರಿನಲ್ಲಿ ಬಿಡುಗಡೆಯಾಯಿತು.
ಧಾನ್ಯ ಪ್ರಕಾಶನದ ಈ ಕೃತಿಯನ್ನು ತೇಜಸ್ವಿಯವರ ಒಡನಾಡಿ, ‘ಪುಸ್ತಕ ಪ್ರಕಾಶನ’ದ ಬಿ ಎನ್ ಶ್ರೀರಾಮ್ ಅವರು ಬಿಡುಗಡೆ ಮಾಡಿದರು.
ಪತ್ರಕರ್ತ ಜಿ ಎನ್ ಮೋಹನ್ ಕೃತಿ ಕುರಿತು ಮಾತನಾಡಿದರು. ಲೇಖಕಿ ಪದ್ಮಾ ಶ್ರೀರಾಮ್, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ ಟಿ ಮುದ್ದೇಶ್, ಧಾನ್ಯ ಸಂಸ್ಥೆಯ ಅಧ್ಯಕ್ಷರಾದ ಡಾ ಡಿ ಅರುಂಧತಿ, ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆಯ ಫೋಟೋ ಆಲ್ಬಮ್ ಇಲ್ಲಿದೆ-
ಫೋಟೋಗಳು: ಶಿವರಾಂ ಪೈಲೂರು / ಪ್ರೇಮಸಾಗರ್
0 ಪ್ರತಿಕ್ರಿಯೆಗಳು