– ಕೆ.ಪಿ.ಸುರೇಶ್
ಉದ್ಯೋಗ ತೊರೆದು ಮಲೆನಾಡಿನ ಮೂಲೆಗೆ ಬಂದು ಕುಳಿತ ನನ್ನಂಥವನಿಗೆ ತೇಜಸ್ವಿ ದಕ್ಕಿದ ಬಗೆ ನನಗೂ ಕéತುಕವೇ.
ನಾನು ಊರಿಗೆ ಮರಳುವ ವೇಳೆಗೆ, ತೇಜಸ್ವಿಯವರಿಂದ ವಾಚಾಮಗೋಚರ ಬೈಸಿಕೊಳ್ಳುವಷ್ಟು ನಾನು ಅವರಿಗೆ ಆತ್ಮೀಯನಾಗಿದ್ದೆ. ಅದು ಅಷ್ಟೇನೂ ಮುಖ್ಯವಲ್ಲ. ಅದರೆ ಊರಿಗೆ ಬಂದು, ಹಳ್ಳಿಯ ಸಂಕಷ್ಟಗಳನ್ನು, ಕೃಷಿಯ ದ್ರಾಬೆ ಕಷ್ಟಗಳನ್ನು ಊರವರೊಂದಿಗೆ ಅನುಭವಿಸುತ್ತಾ ಅರಿತಾಗಲೇ ತೇಜಸ್ವಿ ನನಗೆ ಮುಖ್ಯವಾದದ್ದು.
ಎರಡು ಮೂರು ಸಂದರ್ಭಗಳನ್ನು ಇಲ್ಲಿ ದಾಖಲಿಸುವುದು ಒಳ್ಳೆಯದು-
1) ‘ಈಗ್ಗೆ 15 ವರ್ಷಗಳ ಮೊದಲು ಪ್ರಾಯಶಃ ರಾಜ್ಯದಲ್ಲೇ ಮೊದಲು, ಪರ್ಯಾಯ ಕೃಷಿ ವಿಧಾನಗಳ ಬಗ್ಗೆ ನಮ್ಮೂರಲ್ಲಿ ಕಮ್ಮಟವೊಂದನ್ನು ಏರ್ಪಡಿಸಿ, ನಾರಾಯಣರೆಡ್ಡಿ ಮತ್ತಿತರರನ್ನು ಕರೆದು, ತೇಜಸ್ವಿಯವರನ್ನು ಆಹ್ವಾನಿಸಿದ್ದೆವು. ಹಿಂದಿನ ನಾಲ್ಕು ವರ್ಷಗಳ ಪರಿಚಯ, ಸಲಿಗೆಯ ಮೇಲೆ ನಾನು ದಮ್ಮಯ್ಯ ಹಾಕಿದ್ದೆನಾದರೂ, ಅವರ ಬಂದಾರೆಂಬ ಧೈರ ಇರಲಿಲ್ಲ. ಕಾರ್ಯಕ್ರಮದ ದಿನ, ಎರಡು ಕಾರುಗಳಲ್ಲಿ ತಮ್ಮ ಶ್ರೀಮತಿಯವರನ್ನು ಒಂದಷ್ಟು ಆಸಕ್ತರನ್ನು ತುಂಬಿಕೊಂಡು ತೇಜಸ್ವಿ ಹಾಜರಾಗಿದ್ದರು. ಕಾರಲ್ಲಿ ಬಂದ ಅವರಿಗೆ ಟಿ.ಎ. ಕೊಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಅಂತೂ ಕವರಲ್ಲಿ ಎಷ್ಟೋ ಕಾಸು ಮಡಗಿ ಕೈಗಿತ್ತರೆ, ನೀವೇ ಓತ್ಲಾ ಹೊಡಿತಿದೀರಾ.ಇಟ್ಕಳ್ರಯ್ಯಾ ಎಂದು ನಕ್ಕು ವಾಪಾಸು ಮಾಡಿದ್ದರು.’
2) ನಮ್ಮೂರಿನ ಸೇತುವೆ ಬಗ್ಗೆ ಕಂಡ ಕಂಡ ಕಚೇರಿ ಸುತ್ತಿ ನಾನು ಸೋತಿದ್ದೆ. ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಚಕ್ರವ್ಯೂಹದ ಬಗ್ಗೆ ನಾನೀಗ ಪಾರಂಗತ; ಅದು ಒತ್ತಟ್ಟಿಗಿರಲಿ, ತೇಜಸ್ವಿಯವರಿಗೆ ನಮ್ಮ ಕಷ್ಟ ಹೇಳಿದೆ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿದ್ದ ಸ್ವಣರ್ಾ ಪ್ರಭಾಕರ್ ಅವರಿಗೆ ತೇಜಸ್ವಿ ಒಂದು ಪತ್ರ ಬರೆದರು, ತೇಜಸ್ವಿ ಪತ್ರ ಬರೆದಿದ್ದರೆ ಎಂಬ ಸಂಭ್ರಮಕ್ಕೆ ಪ್ರಾಯಶಃ ಅನುದಾನ ಮಂಜೂರಾಗಿ, ಸೇತುವೆ ಆಯಿತು.
3) ಶಾಲಾಭಿವೃದ್ಧಿ ಸಮಿತಿಗಳಿಗೆ ಆಯ್ಕೆ ಮಾಡುವ ಅಧಿಕಾರವನ್ನು ಶಾಸಕರಿಗೆ ನೀಡುವ ದುರುಳ ನಿಧರ್ಾರವನ್ನು ಎಸ್.ಎಂ.ಕೃಷ್ಣ ಸಕರ್ಾರ ಕೈಗೊಂಡಿತ್ತು. ಸ್ಥಳೀಯವಾಗಿ ನಾವು ಪ್ರತಿಭಟನಾ ನಿರ್ಣಯ ಕೈಗೊಂಡರೂ ಅದಕ್ಕೇನೂ ಬೆಲೆ ಬರಲಿಲ್ಲ. ನಾನು ಈ ವಿಚಾರವನ್ನು ಅನಂತಮೂತರ್ಿ ಮತ್ತು ತೇಜಸ್ವಿಯವರ ಗಮನಕ್ಕೆ ತಂದೆ. ಅನಂತಮೂತರ್ಿ ನೇರ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು. ತೇಜಸ್ವಿ ನೇರ ವಿಶ್ವನಾಥ್ ಅವರಿಗೆ ಫೋನಿನಲ್ಲಿ ತಗಲಿಕೊಂಡು ಉಗಿದರಂತೆ. ಮುಂದಿನ ಶೈಕ್ಷಣಿಕ ಮಾರ್ಗದಲ್ಲಿ ಈ ತಲೆಹೋಕ ಆಜ್ಞೆ ರದ್ದಾಯಿತು! ಈ ಸಕರ್ಾರ ಮತ್ತೆ ಈ ದುರುಳ ಅಧಿಕಾರವನ್ನು ಚಾಲ್ತಿ ಮಾಡಿದೆ.
ಆದರೆ ಈ ಬಾರಿ ಸಣ್ಣ ಊರುಗಳಲ್ಲಿ ಪುಢಾರಿ ಪಕ್ಷರಾಜಕೀಯ ಬೇರೂರಿದ್ದನ್ನು ನಾನು ಗಮನಿಸಿ, ತೇಜಸ್ವಿಯವರಿಗೆ ತಿಳಿಸಿದೆ. ಅವರು ವಿಷಾದದಲ್ಲಿ ‘ತಗೊಳಪ್ಪಾನಂದೂ ಲೆಟರ್. ಇವೆಲ್ಲ ಹೇಳೋ ಮಾತಿಗೆ ಬೆಲೆ ಇಲ್ಲಾಂತಾದ್ರೂ ದಾಖಲೆ ಆಗಲಿ.! ಎಂದು ವಿಷಾದದಲ್ಲಿ ಹೇಳಿದ್ದರು.
ತೇಜಸ್ವಿಯವರು ತಮ್ಮ ವ್ಯಕ್ತಿತ್ವದ ಶಕ್ತಿಯ ಒಂದು ಭಾಗವನ್ನು ತಾವು ನಿತ್ಯ ಗಮನಿಸುತ್ತಿದ್ದ ಗ್ರಾಮೀಣ ಸಂಕಷ್ಟದ ನಿವಾರಣೆಗೆ ನೀಡುತ್ತಿದ್ದುದು ನನಗೆ ಗೊತ್ತು.
ಫುಕವೋಕಾನ ಬಗ್ಗೆ ಪುಸ್ತಕ ಬರೆದರು. ರೈತಾಪಿ ಕಷ್ಟದ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮೂರಿನಂಥ ಅನಾಮಿಕ ಹಳ್ಳಿಗಳ ಕಷ್ಟಕ್ಕೆ ಸ್ಪಂದಿಸಿದರು.
ಹಾಗೇ, ನನ್ನಂಥವನು ಪ್ರಯೋಗದ ಹುಂಬುಹಾದಿಯಲ್ಲಿ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ದುಗುಟಪಟ್ಟರು.
‘ನೋಡಯ್ಯಾ, ಎಲ್ಲಾ ಫ್ಲಾಗ್ ಹಿಡ್ಕಂಡ್ ಸಿಟಿ ಸೇರಿದ್ರು, ಅಲ್ಲಿಂದ್ಲೇ ರಿಲೇ ಮಾಡ್ತಿದಾರೆ’ ಎಂದು ಹೋರಾಟಗಾರ ಬುದ್ಧಿ ಜೀವಿಗಳ ಬಗ್ಗೆ ವ್ಯಗ್ರರಾಗಿ ಹೇಳುತ್ತಾ ‘ಹಳ್ಳೀಲಿರೋದು ಮುಖ್ಯವಲ್ಲಾ, ಸದಾ ವಿರೋಧ ಪಕ್ಷವಾಗಿರೋದು ಮುಖ್ಯ. ನೀ ಏನಾದ್ರೂ ಕಾಸನ್ನು ತಿಂದೇ ಮತ್ತೇ ನೀನೂ ಅವ್ರಂಗೇ ಆಗ್ತೀಯ’ ಎನ್ನುತ್ತಿದ್ದರು.
ಕೃಷಿಯ ನಿತ್ಯ ಆತಂಕ, ಜಂಜಾಟದ ಗ್ರಾಮೀಣ ಬದುಕು ಅಂಚಿಗೆ ಸರಿಯುತ್ತಿರುವ ಈ ದುಷ್ಕಾಲದಲ್ಲಿ, ಅಕ್ಷರ ಬಲ್ಲ ನಾನು ನನ್ನೂರಿಗೆ ಧ್ವನಿಯಾಗಿ, ನನ್ನಂಥೋರಿಗೆ ತೇಜಸ್ವಿ ಧ್ವನಿಯಾಗಿ, ಬೆಂಗಳೂರಿಗೆ ಕೇಳಿಸುವ ಸಾಧ್ಯತೆಯೇ ನಮಗೊಂದು ಆಶಾಕಿರಣವಾಗಿತ್ತು.
ಈಗ ಪ್ರೋಫೆಸರ್ ನಂಜುಂಡಸ್ವಾಮಿ ಸುಂದರೇಶ್, ತೇಜಸ್ವಿ ಹೀಗೆ ಹಳ್ಳಿಗಳ ಸಂಕಟಕ್ಕೆ ದನಿಯಾಗುವವರು ಎದ್ದು ಹೋಗುತ್ತಿದ್ದಂತೆ.. ದುಗುಡ ಹೆಚ್ಚುತ್ತಿದೆ.
ಚಿತ್ರಗಳು: ದಿ ಹಿಂದೂ
its really nice
ಹೀಗೇ ಆಗಾಗ ಬರೆದು ನಗರಪ್ರಜ್ಞೆಯಲ್ಲಿ ಜಡ್ಡುಗಟ್ಟಿಹೋಗಿರುವ ಮನಸ್ಸುಗಳಿಗೆ ಸ್ವಲ್ಪವಾದರೂ ಮುದನೀಡಿ.
ತೇಜಸ್ವಿ ಅವರ ಬಗ್ಗೆ ತಾವು ಬರೆದಿಡು ಓದೋಕ್ಕೆ ತುಂಬಾನೇ ಸಂತೋಷವಾಯ್ತು.
ಹೃತ್ಪೂರ್ವಕ ಧನ್ಯವಾದಗಳು.
ಅನಿಕೇತನ.
ಗ್ರಾಮೀಣ ಜನರ ಸಂಕಷ್ಟದ ಪರಿಹಾರಕ್ಕೆ ತಮ್ಮನ್ನು ವಾವು ಯಾವ ರೀತಿಯಲ್ಲಾದರೂ ತೊಡಗಿಸಿಕೊಳ್ಳುತ್ತಿದ್ದ ಪೂಚಂತೆ ಯವರ ನೆನಪು ಸಕಾಲಿಕವಾಗಿದೆ.ಸರಕಾರ ಮತ್ತೆ ಆ ದುರಳ ಅಧಿಕಾರವನ್ನು ಚಾಲ್ತಿ ನಮ್ಮ ನಾಡಿನ ದುರಂತ,ತೇಜಸ್ವಿ ನಮ್ಮನ್ನು ಯಾವಗಾಲು ಕಾಡುವ;ಕೆಣಕುವ ಅಭಮಾನಿ ಲೇಖಕ.
ಕೆ. ರಾಜಶೇಖರ ಹೊಣಕೆರೆ