
ಆಧುನಿಕ ಕನ್ನಡ ಕಾವ್ಯ ಕಂಡ ಶ್ರೇಷ್ಟ ಕವಿಗಳಾದ ದ. ರಾ. ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ದೇಶೀ ಹಾಗೂ ಜನಪದ ಸತ್ವವನ್ನು ಅದ್ಭುತವಾಗಿ ಬಳಸಿಕೊಂಡವರು. ಜನಪದ ಸತ್ವವನ್ನು ತಮ್ಮ ಕಾವ್ಯದಲ್ಲಿ ಅತ್ಯಂತ ಸೃಜನಶೀಲವಾಗಿ ವಿಸ್ತರಿಸಿದ ಈ ಕವಿಗಳು ಕನ್ನಡ ಕಾವ್ಯದ ದಿಗಂತವನ್ನು ವಿಸ್ತರಿಸಿದರು. ದೇಶೀ ಪುರಾಣ ಲೋಕದ ಜೊತೆಗೆ ವಿಶಿಷ್ಟ ಸಂಬಂಧಗಳನ್ನು ಸ್ಥಾಪಿಸಿಕೊಂಡ ಈ ಇಬ್ಬರೂ ಕವಿಗಳಲ್ಲಿ ಪುರಾಣಪ್ರಜ್ಞೆ ಕೆಲಸ ಮಾಡಿರುವ ಕ್ರಮವನ್ನು ಈ ಅಧ್ಯಯನ ಆಳವಾಗಿ ಶೋಧಿಸಲೆತ್ನಿಸಿದೆ.
ಡೈಲಿ ಬುಕ್ : ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ
ನಿಮಗೆ ಇವೂ ಇಷ್ಟವಾಗಬಹುದು…

0 Comments