ಗೆಳೆಯ ರಾಜಶೇಖರ್ ಬರೆದಿರುವ ಈವರೆಗಿನ ಮುನ್ನುಡಿಗಳಲ್ಲಿ ಗಿರಿಜಾ ಶಾಸ್ತ್ರಿಅವರಿಗೆ ಬರೆದದ್ದು ಅತ್ಯುತ್ತಮವಾಗಿದೆ ಎಂದು ನನ್ನ ಅಭಿಪ್ರಾಯ. ರಾಜಶೇಖರರ ಮುಕ್ತ ಸ್ಪಂದನಕ್ಕೆ ಕಾರಣರಾದ ಗಿರಿಜಾ ಶಾಸ್ತ್ರಿ ತೋರಿಕೆಯಿಲ್ಲದ ಸಹಜ ಕವಿ.
ಅವರು ನಮ್ಮ ಈ ಕಾಲದ ಪ್ರತಿಭಾವಂತ ಸಾಹಿತಿಗಳಲ್ಲಿ ಒಬ್ಬರು.ಇವರ ಪದ್ಯಗಳು ಆಪ್ತ ವಾಕ್ಯಗಳಂತೆ ನಮ್ಮನ್ನು ತಟ್ಟುತ್ತವೆ.
ಸಾಮಾಜಿಕ/ವೈಯಕ್ತಿಕ ಇತ್ಯಾದಿ ವಿಂಗಡನೆ ಮಾಡಲು ಬಾರದಂತೆ ನಮಗೆ ನಾವು ಸತ್ಯವಾಗಿ ಮೌನವಾಗಿಹೇಳಿಕೊಳ್ಳುವ ಮಾತುಗಳಂತೆ ಇವರ ಕವಿತೆಗಳು ಇರುತ್ತವೆ.
ನನಗೆ ಪ್ರಿಯರಾದ ಕವಿಗಳಲ್ಲಿ ಇವರೊಬ್ಬರು.
ಯು.ಆರ್.ಅನಂತಮೂರ್ತಿ




0 Comments