ಡೈಲಿ ಬುಕ್ : ನಾರಾಯಣ ಬಾಬಾನಗರ ಅವರ ’ಗುಬ್ಬಿ ಗೂಡು’


’ನಿಮ್ಮೆಲ್ಲರ ಮಾನಸ’ ಮಾಸಪತ್ರಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟಗೊಂಡ ನಾರಾಯಣ ಬಾಬಾನಗರ ಅವರ ಗುಬ್ಬಿಗೂಡು ಅಂಕಣ ಬರಹಗಳ ಅಪರೂಪದ ಸಂಕಲನವೇ ‘ಗುಬ್ಬಿಗೂಡು’ ಪುಸ್ತಕ. ಪ್ರಸ್ತುತ ವಿಜ್ಞಾನ ಶಿಕ್ಷಕರಾಗಿ ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ ಬಾಬಾನಗರ ಅವರು ತಮ್ಮ ವೃತ್ತಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಇಲ್ಲಿ ಬರಹ ರೂಪಕ್ಕಿಳಿಸಿದ್ದಾರೆ. ವಿದ್ಯಾರ್ಥಿಗಳ ಬದುಕಿನ ಕಷ್ಟ, ಬೇಸರ, ಸೋಲು, ಆತಂಕಗಳಿಗೆಲ್ಲ ಶಿಕ್ಷಕನೊಳಗಿನ ಒಬ್ಬ ಸ್ನೇಹಿತನಾಗಿ ಪರಿಹಾರ ಹೇಳಿರುವ ನಾರಾಯಣ ಬಾಬಾನಗರ ಅವರು ತಮ್ಮ ಸಹೋದ್ಯೋಗಿಗಳ ಕೆಲವು ಅನುಭವಗಳ ಬಗ್ಗೆಯೂ ಇಲ್ಲಿ ಬರೆದಿದ್ದಾರೆ. ತಮ್ಮ ವಿದ್ಯಾರ್ಥಿಗಳ ಬದುಕನ್ನು ನೋಡುತ್ತಾ, ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವ ಬಾಬಾನಗರ ಅವರ ಈ ಪುಸ್ತಕದಲ್ಲಿ ಒಟ್ಟು 24 ಅಂಕಣ ಬರಹಗಳಿವೆ.
ಒಟ್ಟು 96 ಪುಟಗಳ ಈ ಪುಸ್ತಕವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಬೆಲೆ 80 ರೂಪಾಯಿ. ಇದು ಬೆನಕ ಬುಕ್ಸ್ ಬ್ಯಾಂಕಿನ 36ನೇ ಪ್ರಕಟಣೆಯಾಗಿದೆ.
 

‍ಲೇಖಕರು G

December 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: