ಡೈಲಿ ಬುಕ್ : ಡಾ ಡಿ ಸಿ ರಾಜಪ್ಪ ಅವರ ’ಹುಲ್ಲು ಮೇಯುವ ಕುದುರೆ’

ಡಾ. ಡಿ. ಸಿ. ರಾಜಪ್ಪ ನನ್ನ ಆತ್ಮೀಯರು. ಅವರು ಪೊಲೀಸ್ ಪೋಷಾಕಿನಲ್ಲಿ, ನಾನು ಪತ್ರಕರ್ತನ ಪೋಷಾಕಿನಲ್ಲಿ ಇದ್ದರೂ ನಮ್ಮಿಬ್ಬರನ್ನು ಬೆಸೆದದ್ದು ಕವಿತೆ. ಮಂಗಳೂರು, ಗುಲ್ಬರ್ಗಾದಲ್ಲಿ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಆ ನಂತರವೂ ನನ್ನ ಕಾವ್ಯವನ್ನು ಅವರು, ಅವರ ಕಾವ್ಯವನ್ನು ನಾನು ಹಿಂಬಾಲಿಸುತ್ತಲೇ ಬಂದಿದ್ದೇವೆ ನನ್ನ ಮನೆಯ ಅಂಗಳದಲ್ಲಿ ರಾಜಪ್ಪ ಕವಿತೆಗಳನ್ನು ಹರಡಿಕೊಂಡು ವಾಚನ ಮಾಡಿದಾಗಲೇ ಎಲ್ಲರಿಗೂ ಒಬ್ಬ ಶಕ್ತ ಕವಿಯ ಆಗಮನದ ಸಂದೇಶ ಮುಟ್ಟಿಯಾಗಿತ್ತು. ಅಂದಿನಿಂದ ಇಂದಿನವರೆಗೆ ರಾಜಪ್ಪ ಪೊಲೀಸ್ ಕೆಲಸದ ನಡುವೆಯೂ ಕಾವ್ಯಯಾನ ನಡೆಸುತ್ತಲೇ ಬಂದಿದ್ದಾರೆ.
 

ಡಾ. ರಾಜಪ್ಪ ಅವರ ಕಾವ್ಯಕ್ಕೆ ಯಾವ ರಿಯಾಯಿತಿಯೂ ಬೇಕಿಲ್ಲ. ರಾಜಪ್ಪ ಅವರ ಜೊತೆ ಒಡನಾಡಿದ, ಅವರ ಕವಿತೆಗೆ ಮನಸ್ಸು ಕೊಟ್ಟ ಎಲ್ಲರಿಗೂ ಇದು ಗೊತ್ತು. ತಾವು ಕಂಡುಂಡ ಅನುಭವಗಳನ್ನು ಹಲವರು ಬರೆದಿದ್ದಾರೆ. ಆದರೆ ಅವು ಕವಿತೆಯಾಗದೆ ಮೇಲ್ದನಿಯ ಸಾಲುಗಳಾಗಿ ಉಳಿದದ್ದೇ ಹೆಚ್ಚು. ಆದರೆ ರಾಜಪ್ಪ ಅವರ ಭಾವುಕ ಮನಸ್ಸು ಪ್ರತಿಯೊಂದನ್ನೂ ಎದೆಯಾಳಕ್ಕೆ ಎಳೆದುಕೊಳ್ಳುತ್ತದೆ. ಹಾಗಾಗಿಯೇ ಅವರ ಕವಿತೆಗಳು ಓದಿದ ಯಾರನ್ನೂ ತಟ್ಟದೆ ಬಿಡದು. ‘ಮಾರಿ’, ‘ಬರದು ಭೂಮಿಯ ಸತ್ಯಗಳು’ ಕವನ ಸಂಕಲನಗಳ ಮೂಲಕ ಈಗಾಗಲೇ ಸಾಕಷ್ಟು ಹೆಸರಾದ ರಾಜಪ್ಪ ಅವರ ಈ ‘ಹುಲ್ಲು ಮೇಯುವ ಕುದುರೆ’ಯೂ ಕಾವ್ಯ ಲೋಕದಲ್ಲಿ ಗತ್ತಿನಿಂದ ಹೆಜ್ಜೆ ಹಾಕುವುದರಲ್ಲಿ ಸಂಶಯವಿಲ್ಲ.
ಜಿ. ಎನ್. ಮೋಹನ್
 

‍ಲೇಖಕರು avadhi

January 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: