ಎನ್ ಎ ಎಂ ಇಸ್ಮಾಯಿಲ್
ನಾವು ಯಾವತ್ತೂ ನಮ್ಮ ವಿರೋಧಿಗಳನ್ನು ಶಿಕ್ಷಿಸು ಎಂದು ಉಸೇನ್ ನನ್ನು ಬೇಡಿಕೊಂಡಿಲ್ಲ . ನಮಗೆ ಯಾರ ಮೇಲಾದರೂ ಸೇಡಿದ್ದರೆ ಅದನ್ನು ನಾವೇ ತೀರಿಸಿಕೊಳ್ಳುತ್ತಿದ್ದೆವು. ಉಸೆನ್ ಮನುಷ್ಯರ ಕ್ಷುಲ್ಲಕ ಜಗಳವನ್ನು ಲಕ್ಷಿಸುವುದಿಲ್ಲ ಎಂದು ನಮಗೆ ಕಲಿಸಿಕೊಡಲಾಗಿತ್ತು.

ಮಗೆ ದೈವದತ್ತ ಹಕ್ಕಾಗಿ ದೊರೆತ ಭೂಮಿಗೆ ಹಿಂದಿರುಗುವ ಸ್ವಾತಂತ್ರ ಬೇಕು. ನಮ್ಮ ಸಂಖ್ಯೆ ಕುಸಿಯುತ್ತಿದೆ. ಈಗಾಗಲೇ ನಾವು ಕೃಷಿಯ ವಿಧಾನಗಳನ್ನು ಕಲಿತಿರುವುದರಿಂದ ನಮಗೆ ಹಿಂದಿನಷ್ಟು ದೊಡ್ಡ ಪ್ರಮಾಣದ ಭೂಮಿಯ ಅಗತ್ಯವಿಲ್ಲ. ನಮಗೆ ದೇವರು ಆದಿಯಲ್ಲಿ ಕೊಟ್ಟಿದ್ದ ಎಲ್ಲಾ ಭೂಮಿಯನ್ನೂ ನಮಗೇ ಕೊಡಬೇಕೆಂದು ನಾವು ಕೇಳುತ್ತಿಲ್ಲ. ಆದರೆ ನಮಗೆ ಕೃಷಿ ಮಾಡುವುದಕ್ಕೆ ಅಗತ್ಯವಿರುವಷ್ಟು ಭೂಮಿ ಬೇಕು. ನಮಗೆ ಅಗತ್ಯವಿಲ್ಲದ ಭೂಮಿಯಲ್ಲಿ ಬಿಳಿಯರು ಕೃಷಿ ಮಾಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ.
ಬೆನ್ನುಡಿ



0 Comments