ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೇಕಾಯ್: ಮೊಟ್ಟೆಗೂ ಕನ್ನ!!

ಕಡಿದಾಳು ಶಾಮಣ್ಣ ನಿಮಗೆ ಗೊತ್ತು, ಅವರ ಹೋರಾಟ ನಿಮಗೆ ಗೊತ್ತು, ಕೆ ಅಕ್ಷತಾ ನಿಮಗೆ ಗೊತ್ತು. ಅವರು ಶಾಮಣ್ಣನವರ ಅನುಭವಗಳನ್ನ ನಿರೂಪಿಸಿರುವುದು ಗೊತ್ತು. ಅಹರ್ನಿಶಿ ಪ್ರಕಾಶನ ನಿಮಗೆ ಗೊತ್ತು. ಅವರು ಈ ಕೃತಿಯನ್ನು ಹೊರತಂದಿರುವುದು ಗೊತ್ತು. ಈ ಎಲ್ಲಾ ಗೊತ್ತು..ಗೊತ್ತು..ಗಳ ಮಧ್ಯೆ ಗೊತ್ತಿಲ್ಲದ ಸಂಗತಿ ಇಲ್ಲಿದೆ. ಅದು ಕಡಿದಾಳು ಶಾಮಣ್ಣನವರ ಮಹಾ ಹಾಸ್ಯಪ್ರಜ್ಞೆ. ಅವರ ಕೃತಿಯಿಂದ ಆಯ್ದ ಇಂತಹ ಪುಟ್ಟ ಜ್ಹಲಕ್ ಗಳು ಆಗೀಗ ನಿಮ್ಮ ಮುಂದೆ ಇಡುತ್ತೇವೆ– ಅಣ್ಣಯ್ಯ ಹೆಗ್ಡೇರ ತಮ್ಮಂದಿರು ಶ್ರೀನಿವಾಸ ಮತ್ತು ಕಿಟ್ಟಯ್ಯ ಪೇಟೆಯಿಂದ ಬಂದಾಗ ಅವರಿಗಾಗಿ ಮೂಡುವಳ್ಳಿ ಅಜ್ಜಿ ಮೊಟ್ಟೆ ತಂದಿಡೋರು. ಅದರಲ್ಲಿ ನಮಗೇನು ಪಾಲಿರಲಿಲ್ಲ. ಆದರೆ ಮೊಟ್ಟೆ ನೋಡ್ತಿದ್ದಂಗೆ ತಿನ್ನೊ ಆಸೆ ತಡೆಯಕಾಗ್ತಿರಲಿಲ್ಲ. ಅದಕ್ಕೆ ಒಂದು ಉಪಾಯ ಕಂಡುಕೊಂಡಿದ್ದೆ. ಮೊಟ್ಟೆ ಕದ್ದು ಅದರ ಚಿಪ್ಪನ್ನು ಸೂಜಿಯಿಂದ ಚುಚ್ಚಿ ಅತಿ ಸಣ್ಣ ರಂಧ್ರ ಮಾಡಿ ಅದರ ಮೂಲಕ ಒಳಗಿನ ಲೋಳೆಯನ್ನು ಹೀರಿ ಮತ್ತೆ ಖಾಲಿ ಚಿಪ್ಪನ್ನ ಅದಿರೋ ಜಾಗದಲ್ಲಿ ಇಟ್ಟು ಸುಮ್ನಿದ್ದು ಬಿಡ್ತಿದ್ದೆ. ಮೊಟ್ಟೆಯ ಹೊರಗಿನ ಆಕಾರ ಇದ್ದಂಗೆ ಇರ್ತಿತ್ತು. ಒಳಗೆ ಮಾತ್ರ ಖಾಲಿಯಾಗಿರ್ತಿತ್ತು. ಮೊಟ್ಟೆಗೆ ತೂತು ಕೊರೆದಿರೋದು ಕಾಣಲೇಬಾರದು ಹಾಗೆ, ಚುಚ್ಚಬೇಕಿತ್ತು. ಅದೇನು ಸುಲಭದ್ದಾಗಿರಲಿಲ್ಲ. ಹಠಯೋಗ ಸಾಧನೆ ಮಾಡಿದಷ್ಟು ಕಠಿಣವಾಗಿರೋದು. ಆದರೆ ಮೊಟ್ಟೆ ತಿನ್ನೋ ಆಸೆ ಎಂಥ ಹಠಯೋಗದ ಪ್ರಲೋಭನೆಗೂ ಪ್ರೇರೇಪಿಸುವಷ್ಟಿತ್ತು. ಅಂತೂ ಮೊಟ್ಟೆ ತೂತು ಮಾಡಿ ಹೊರಗಿನ ಚಿಪ್ಪಿನ ಮೇಲೆ ಚೂರು ಲೋಳೆ ಕಲೆ ಬೀಳಬಾರದು ಹಾಗೆ ಎಚ್ಚರಿಕೆಯಿಂದ ಹೀರ್ತಿದ್ದೆ. ಕಿಟ್ಟಯ್ಯ ಮಾವ ಅ ಮೊಟ್ಟೆಗಳನ್ನ ಎತ್ತಿ ಹಿಡಿದು, ಅಯ್ಯೋ ಎಷ್ಟು ಹಗುರವಾಗಿದೆ ಅಂತ ಅಚ್ಚರಿಯಿಂದ ಒಡೆದು ನೋಡೋರು. ಅಲ್ಲೇನಿರ್ತಿತ್ತು? ಬರಿ ಚಿಪ್ಪು. ಮೊದ ಮೊದಲು ಸತ್ಯ ಏನು ಅಂತ ತಿಳೀಲಿಲ್ಲ. ನಾನು ಇವ್ರಿಗೆ ಗೊತ್ತಾಗೋಕೆ ಸಾಧ್ಯವೇ ಇಲ್ಲ ಅನ್ನೋ ನಿಧರ್ಾರಕ್ಕೆ ಬಂದು ನಿರಾಂತಕವಾಗಿ ನನ್ನ ಕಳ್ತನ ಮುಂದುವರೆಸಿದೆ. ಆದರೆ ನಿರಂತರವಾಗಿ ಮೊಟ್ಟೆ ಲೋಳೆ ಕಳ್ತನ ಆಗಲಿಕ್ಕೆ ಶುರುವಾದಾಗ ಇದು ಯಾರದ್ದೋ ಮಾಸ್ಟರ್ ಮೈಂಡ್ ಇಲ್ಲಿ ಕೆಲಸ ಮಾಡಿದೆ ಅನ್ನೋ ನಿಧರ್ಾರಕ್ಕೆ ಬಂದ ಮನೆಯವ್ರು ಕೊನೆಗೊಂದು ದಿನ ರೆಡ್ ಹ್ಯಾಂಡಾಗಿ ಕಳ್ಳನನ್ನು ಹಿಡಿದು ನನ್ನ ಕೆಲಸಕ್ಕೆ ಕಲ್ಲು ಹಾಕಿದ್ರು.]]>

‍ಲೇಖಕರು G

10 February, 2012

3 Comments

  1. D.RAVI VARMA

    sakattagide.shamannanavara saahasa alvaa

  2. MUDIRAJA

    haa haa tumba chennagide motte kallatana

  3. bhanumathi

    mottena higu kadibahuda. . . gotirlila

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading