ಟಿ ಎಸ್ ಶ್ರವಣಕುಮಾರಿ ಅವರಿಗೆ 'ಮೈತ್ರಿ ಪುಸ್ತಕ' ಪುರಸ್ಕಾರ

ಮೈತ್ರಿ ಪ್ರಕಾಶನ ಹಮ್ಮಿಕೊಂಡಿದ್ದ ಕಥಾ ಸಂಕಲನ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಗಿದೆ.
‘ಅವಧಿ’ಯ ಲೇಖಕಿ ಟಿ ಎಸ್ ಶ್ರವಣಕುಮಾರಿ ಅವರ ಹಸ್ತಪ್ರತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಖ್ಯಾತ ಕಥೆಗಾರ ಶ್ರೀಧರ ಬಳಗಾರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಈವರೆಗೆ ಒಂದೂ ಕಥಾ ಸಂಕಲನವನ್ನು ಹೊರತರದ ಕಥೆಗಾರರಿಗಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ‘ಮೈತ್ರಿ ಪುಸ್ತಕ-೨೦೨೦’ ಮೊದಲ ವರ್ಷದ ಬಹುಮಾನ ವಿಜೇತರಾದ ಟಿ ಎಸ್ ಶ್ರವಣಕುಮಾರಿ ಅವರಸಂಕಲನವನ್ನು ಪ್ರಕಟಿಸಿ ಅವರಿಗೆ ೫ ಸಾವಿರ ಗೌರವ ಧನವನ್ನೂ ನೀಡಲಾಗುವುದು ಎಂದು ಪ್ರಕಾಶನದ ಉಮೇಶ ದೇಸಾಯಿ ಅವರು ತಿಳಿಸಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಶ್ರವಣಕುಮಾರಿ ಅವರು ಬ್ಯಾಂಕ್ ನೌಕರರಾಗಿದ್ದರು. ತಮ್ಮ ನಿವೃತ್ತಿಯ ನಂತರ ಬರೆಯಲು ಆರಂಭಿಸಿದ ಅವರ ಸಾಕಷ್ಟು ಲಹರಿ, ಪ್ರವಾಸ ಮಾಲಿಕೆ ‘ಅವಧಿ’ಯಲ್ಲಿ ಪ್ರಕಟವಾಗಿದೆ. ಕನ್ನಡದ ಹೆಮ್ಮೆಯ ಸಾಹಿತಿ ತರಾಸು ಇವರ ಸೋದರಮಾವ… ಸದ್ಯ ಬೆಂಗಳೂರಿನಲ್ಲಿ ವಾಸ.

‍ಲೇಖಕರು avadhi

March 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. T S SHRAVANA KUMARI

    ಅಭಿನಂದನೆಗಳನ್ನು ಹೇಳಿದ ಸ್ಮಿತಾ, ಸರೋಜಿನಿ, ಸುಧಾ ಮತ್ತು ಸುಮತಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: