
ಸೋಮು ರೆಡ್ಡಿಯವರ ಹೊಸ ಕಾದಂಬರಿ- ಕಂದೀಲು
ಕಾದಂಬರಿಯ ಕುರಿತು ಜೋಗಿ ಹೀಗೆ ಹೇಳಿದ್ದಾರೆ.
ಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ.
ಇದೆಲ್ಲ ಎಷ್ಟು ಚೆನ್ನಾಗಿದೆ ಎಂದು ಉದ್ಗರಿಸಲಿಕ್ಕೂ ಆಗದಂತೆ ಇಲ್ಲಿ ನಡೆಯುವ ಘಟನೆಗಳು ಒಮ್ಮೆ ಅಚ್ಚರಿಗೊಳಿಸುತ್ತಾ ಮತ್ತೊಮ್ಮೆ ಆಘಾತಗೊಳಿಸುತ್ತಾ ದೇವರೇ, ಇವೆಲ್ಲ ಸುಳ್ಳಾಗಿರಲಿ ಎಂದುಕೊಳ್ಳುವಂತೆ ಮಾಡುತ್ತಾ ನಮ್ಮ ಅರಿವು ಅನುಭವವನ್ನು ಕಂಗಾಲು ಮಾಡುತ್ತವೆ.
ಇಲ್ಲಿಯ ಜಗತ್ತು ನನಗೆ ಹೊಸತು. ಆರಂಭದಲ್ಲಿ ಕುಂವೀ ಕತೆಗಳನ್ನು ಓದುತ್ತಾ ಬೆರಗಾದ ಹಾಗೆ ನಾನು ಈ ಪ್ರಸಂಗಗಳನ್ನು ಓದುವಾಗಲೂ ಬೆರಗಾದೆ. ಸೋಮು ರೆಡ್ಡಿಯವರ ಅನುಭವ, ಅದು ಕಾದಂಬರಿಯಾದ ರೀತಿ ಮತ್ತು ಅವರು ಅದನ್ನು ಹೊರಗೆ ನಿಂತು ನಿರೂಪಿಸುವ ಕ್ರಮ ಎಲ್ಲವೂ ಹೊಸತಾಗಿದೆ. ಗೊತ್ತಿಲ್ಲದ ಊರಲ್ಲಿ ಒಂದು ಬೆಳಗ್ಗೆ ಧುತ್ತೆಂದು ಇಳಿದವನಂತೆ ನಾನು ದಿಕ್ಕೆಟ್ಟಿದ್ದೇನೆ. ಈ ಕಾದಂಬರಿ ಅಷ್ಟರ ಮಟ್ಟಿಗೆ ಹೊಸ ಲೋಕವನ್ನು ತೋರಿಸುತ್ತದೆ.
ಜೋಗಿ ಹೇಳುತ್ತಾರೆ: ಹೊಸ ಲೋಕವ ತೋರಿಸುತ್ತೆ 'ಕಂದೀಲು'
ನಿಮಗೆ ಇವೂ ಇಷ್ಟವಾಗಬಹುದು…




ಪುಸ್ತಕ ಪರಿಚಯ ನೋಡಿದರೆ ಓದಬೇಕೆನಿಸುತ್ತಿದೆ.