ಹಂತಕಿ ಶುಭಾಗೆ ಜೀವಾವಧಿ ಶಿಕ್ಷೆ! ಅತ್ಯಂತ ಕ್ರೂರ ಮನಸ್ಸಿನ ವಿಷ ಆಕೆ. ಆ ಘಟನೆಯನ್ನು ಈಟಿವಿಯಲ್ಲಿ ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ ಉದಯ ವಾಹಿನಿಯಲ್ಲಿ ಕ್ರೈಂ ಸ್ಟೋರಿ ಯಲ್ಲಿ ಬಾಲಕೃಷ್ಣ ಕಾಕತ್ಕರ್ ವೀಕ್ಷಕರಿಗೆ ವಿವರವಾಗಿ ಹೇಳಿದ್ದರು. ಅತ್ಯಂತ ನೋವಿನ ಸಂಗತಿ ಅದು. ಖುದ್ದು ರವಿ ಬೆಳಗೆರೆ ಹಾಗೂ ಬಾಲಕೃಷ್ಣ ಕಾಕತ್ಕರ್ ಕಣ್ಣೀರಾಗಿದ್ದರು. ಆದರೆ ಈ ವಿಷಯವನ್ನು ಹೆಚ್ಚು ಹೃದಯಕ್ಕೆ ತಟ್ಟುವಂತೆ ಹೇಳಿದ್ದು ರವೀ.
ಕ್ರೈಂ ಕಾರ್ಯಕ್ರಮಗಳಲ್ಲಿ ಹಸಿಹಸಿ ಸಂಗತಿಗಳು ಸಾಮಾನ್ಯ ಆದ್ರೆ ಅದನ್ನು ಒಪ್ಪವಾಗಿ ಶುದ್ಧ ಮಾಡಿ ವೀಕ್ಷಕರ ಕೈಲಿ ಇಡುವುದು ಸುಲಭದ ಸಂಗತಿಯಲ್ಲ. ಈ ವಿಷಯವನ್ನು ಬೆಳಗೆರೆ ಹಾಗೂ ಕಾಕತ್ಕರ್ ಸಮರ್ಥವಾಗಿ ಮಾಡ್ತಾ ಇದ್ರು. ಆದರೂ ಆಗಾಗ ಎಡವಟ್ಟುಗಳು ..!
ಆಕೆಯ ಎಂಗೇಜ್ ಮೆಂಟ್ ಸೀಡಿಯನ್ನು ಅಂದು ಸಮಸ್ತ ವೀಕ್ಷಕರು ಕಣ್ಣೀರಾಗಿ ವೀಕ್ಷಿಸಿದ್ದರು.ಯಾರ ಬದುಕಲ್ಲೂ ಇಂತಹ ಪರಿಸ್ಥಿತಿ ಎದುರಾಗ ಬಾರದು.
ಇಷ್ಟಾದ್ರೂ ಶಿಕ್ಷೆಯ ದಿನ ಆ ಹೆಣ್ಣುಮಗಳ ಮುಖದಲ್ಲಿ ಇದ್ದ ಆ ದಾಷ್ಟಿಕತೆ ಬೆಚ್ಚಿ ಬೀಳುವಂತೆ ಮಾಡಿತು. ನಾನು ಕ್ರೈ೦ ಕಾದಂಬರಿ ಓದುವಾಗ ಅದರಲ್ಲಿ ಕೊಲೆಗಾರನ ಕಣ್ಣು ಶೀತಲವಾಗಿತ್ತು ಎನ್ನುವ ಅಂಶ ಬರೆದಾತ ವರ್ಣಿಸಿರುವುದನ್ನು ಓದಿದ್ದೆ, ಆದರೆ ಈ ಕೇಸ್ ನಲ್ಲಿ ಆ ಅಂಶ ಅಬ್ಬ! ಭೀಕರ !!
ಪೂರ್ಣ ಓದಿಗೆ: ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು