ರಾಮಾಯಣ ಕೃತಿ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಅನೇಕ ಚರ್ಚೆ, ವಾದ ವಿವಾದಗಳಿಗೂ ದಾರಿಯಾಗಿದೆ.
ಈ ಮಧ್ಯೆ ‘ಬಹುರೂಪಿ’ ಪ್ರಕಟಿಸಿರುವ ಜಿ ಎನ್ ನಾಗರಾಜ್ ಅವರ ‘ನಿಜ ರಾಮಾಯಾನದ ಅನ್ವೇಷಣೆ’ ಕೃತಿಯ ಬಗ್ಗೆ ಒಂದು ಗಂಭೀರ ಮಂಥನ ರಾಮನಗರದ ಜಾನಪದ ಲೋಕದಲ್ಲಿ ಜರುಗಿತು.
ಕೃತಿಯ ಲೇಖಕರಾದ ಜಿ ಎನ್ ನಾಗರಾಜ್ ಅವರು ತಾವು ಐದು ದಶಕಗಳ ಕಾಲ ರಾಮಾಯಣದ ಹಲವು ಆವೃತ್ತಿಗಳನ್ನು ಓದಿ ನಡೆಸಿದ ಸಂಶೋಧನೆ ಹಾಗೂ ಅದರಿಂದ ತಲುಪಿದ ನಿರ್ಣಯಗಳ ಬಗ್ಗೆ ಮಾತನಾಡಿದರು. ನಂತರ ಈ ಬಗ್ಗೆ ವಿಸ್ತೃತ ಚರ್ಚೆಯಾಯಿತು.
ಕುವೆಂಪು ಅವರ ‘ರಾಮಾಯಣ ದರ್ಶನಂ’ ವಾಚನದೊಂದಿಗೆ ಕಾರ್ಯಕ್ರಮ ಮುಗಿಯಿತು.
ಜಿ ಎನ್ ನಾಗರಾಜ್, ಡಾ ಅನಿಲ್, ಎನ್ ಆರ್ ವಿಶುಕುಮಾರ್, ಹೆಚ್ ಆರ್ ಸುಜಾತಾ, ಜಿ ಎನ್ ಮೋಹನ್, ಸವಿತಾ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಕೆ ಎಸ್ ಲಕ್ಷ್ಮಿ, ಲಕ್ಷ್ಮಿ ಭಾವುಗೆ ಹಾಗೂ ಕೆ ಎನ್ ಉಮೇಶ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸಂಘಟಕ ಬಳಗ
ಈ ಕೃತಿಯನ್ನು ಕೊಳ್ಳಲು
0 ಪ್ರತಿಕ್ರಿಯೆಗಳು