
ಜಯರಾಮಾಚಾರಿ
‘ಬದುಕು ಅಲ್ಲಿಗೆ ಮುಗಿಯುವುದಿಲ್ಲ.. ಬದುಕು ಪ್ರೀತಿಯ ಕತೆ ಇದು, ಬದುಕು ಮುಂದುವರಿಯುವುದು.’
ಇದನ್ನು ಒಂದು ಕತೆ ಕಾದಂಬರಿ ಕವಿತಾ ಸಂಕಲನದಂತೆ ಓದಲು ಆಗುವುದಿಲ್ಲ. ಇದೊಂದು ತನ್ನ ಕಣ್ಮುಂದೆಯೇ ಆಡಿ ಬೆಳೆದು ಬದುಕಿ ಕೊನೆಗೆ ತತ್ತರಿಸಿ ಮಡಿದ ಮಗನ ಬಗ್ಗೆ ಅಮ್ಮ ನಮ್ಮೆದುರು ಕೂತು ಹೇಳಿದ ಜೀವನ ದರ್ಶನ. ತನ್ನ ಮಗನ ಬಗ್ಗೆ ಹೆಮ್ಮೆಯ ಮಾತುಗಳು ಹೇಳುತ್ತಲೇ, ಅಯ್ಯೋ ನನ್ನ ಕಂದ ಸೊರಗುತ್ತಿದೆ ಎಂದು ಒದ್ದಾಡುವ ಮಾತೃ ಹೃದಯದ ಕತನ ಇದು.

ಕ್ಯಾನ್ಸರ್ ಈ ಕಾಲದ ದೊಡ್ಡ ಶತ್ರು. ಅಂತ ಕ್ಯಾನ್ಸರಿಗೆ ತುತ್ತಾದ ಕೊನೇ ಸ್ಟೇಜಿನಲ್ಲಿ ಗೊತ್ತಾದ ಮಗನೂ ಅಮ್ಮಾ ಏನೋ ಹೋದಂತಾಯ್ತು ಎಂದಾಗ ಆ ತಾಯಿಗೆ ಅದು ಮಗನ ಸಾವು ಎಂದು ಗೊತ್ತಾಗಿರಲಿಲ್ಲ. ರಾತ್ರಿ ಮಲಗಿ ಎದ್ದರೆ ನಗುತ್ತಲೇ ಸಿಹಿ ಸಾವನ್ನಪ್ಪಿರೊ ಮಗ.
ಇದೊಂದು ಹೃದಯಕ್ಕೆ ಕೈ ಹಾಕಿ ಅಲ್ಲಾಡಿಸಿಬಿಡುವ ಕತನ, ಇಡೀ ಕತನದಲ್ಲಿ ನಾವೆಂದೂ ನೋಡಿರದ ತುಷಾರ್ ಎಂಬ ಒಂದು ಸಹೃದಯದ ಬದುಕು ಕೂಡ ನೋಡುತ್ತೇವೆ ಅದರಾಚೆಗೂ ನಮ್ಮನ್ನ ತಟ್ಟೊದು ತಾಯಿಯ ದುಃಖ !
ಈ ಪುಸ್ತಕ ಓದ್ಬೇಕು ನೀವು ಎಂದು ಬೇರೆಯವರಿಗೆ ಹೇಳಲೂ ಭಯವಾಗುವ ಪುಸ್ತಕ. ಒಬ್ಬ ಒಳ್ಳೆಯ ಮಗನಿಗೆ ಇದಕ್ಕಿಂತ ಒಂದು ನುಡಿನಮನ ಸಲ್ಲಿಸಲು ಸಾಧ್ಯವೇ?!
ಇನ್ಯಾವುದೋ ಮಲ್ಟಿವರ್ಸಿನಲ್ಲಿ ತುಷಾರ್ ಒಂದು ಸಾದಾ ಟೀಶರ್ಟ್ ಜೀನ್ಸ್ ಹಾಕಿ ಟ್ರೆಕ್ಕಿಂಗ್ ಮಾಡುತ್ತಿರಲಿ, ಅವರ ಹೃದಯದಲ್ಲಿ ವಾಪಾಸು ಮನೆಗೆ ಹೋಗಿ ಕಿಚಡಿ ತಿನ್ನುವ ಆಸೆಯೊಂದೊ ಉಳಿದಿರಲಿ.
ಕೃತಿ: ‘ತುಷಾರಹಾರ’
ಪ್ರಕಾಶನ : ಬಹುರೂಪಿ
ಪುಟಗಳು : 154
ಬೆಲೆ : ರೂ 175
ಪ್ರತಿಗಳಿಗಾಗಿ ಸಂಪರ್ಕಿಸಿ : 70191 82729
ಅಥವಾ ಇಲ್ಲಿ ಭೇಟಿ ಕೊಡಿ : https://bit.ly/3Nfm4pQ







0 Comments