ಛಂದ ಪುಸ್ತಕ ಫಲಿತಾಂಶ
ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಪದ್ಮನಾಭ ಭಟ್, ಶೇವ್ಕಾರ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. 23 ವರ್ಷದ ಪದ್ಮನಾಭ ಉತ್ತರ ಕನ್ನಡ ಜಿಲ್ಲೆಯವರು. ಸದ್ಯ ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ವಿಮರ್ಶಕಿ ಶ್ರೀಮತಿ ಎಂ.ಎಸ್. ಆಶಾದೇವಿ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 48 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಕತೆಗಾರ್ತಿ ಸುಮಂಗಲಾ ಮಾಡಿದ್ದರು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹದಿನೈದು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಇದೇ ಜೂನ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.







ಕಂಗ್ರಾಟ್ಸ್ ಲೇ:)
Heartly congratulations to Padmanabh.
Congratulations to Padmanabha Bhat
abhinandanegaLu..
Congrats Padmanabh.
ಪದ್ಮನಾಭ ಭಟ್, ಶೇವ್ಕಾರ್ ಅವರಿಗೆ ಆತ್ಮೀಯ ಶುಭಾಷಯಗಳು.
ಅನುಪಮಾ ಪ್ರಸಾದ್.
Congratulations…
.
Abhinandanegalu…. 🙂
padmanabh abhinandanegalu
kumvee
congrats Padmanabha
abhinandanegalu …..padmanaabha bhat…ji.