ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…

ಚೈತ್ರಾ ಶಿವಯೋಗಿಮಠ

ಯುದ್ಧಕ್ಕ ಹೋಗಿ ಬಂದ
ನನ್ನ ಮಗ
ಎದೆಯುಬ್ಬಿಸಿ ಹೇಳ್ತೀನೀ
ಗೆದ್ದ ಬಂದ ಅವ
ಯುದ್ಧ ಮುಗೀತು ಎಲ್ಲಾ
ಮುಗೀತು ಇನ್ನ ಅಂದು
ನಿರಾಳ ಆಗಬೇಕಂದೆ ನಾ

ಖರೆ ಕತಿ ಈಗ ಶುರುವಾಗ್ತದ
ಅಂತಿಂಥಾ ಕತಿ ಅಲ್ಲಿದು
ಕಣ್ಣಿರಿಂದ ಬರ್ದದ್ದು ಇದು
ರಕ್ತದ ಕಲಿ ಹಾಳಿ ತುಂಬಾ
ಕರುಳು ಹಿಂಡೂ ಕೂಗಗಳದ್ದ
ಕಾರೋಬಾರು ಅದರ ತುಂಬಾ

ರಾತ್ರೋ ರಾತ್ರಿ ಬೆಚ್ಚಿ ಬಿದ್ದು
ಚೀರ್ಕೋತ ಏಳ್ತಾನ ನನ್ನ ಮಗ
ಜೊತಿಗಾರರು ಕಣ್ಣು ಮುಂದಾ
ಚೂರು ಚೂರು ಆದರು
ಕೋವಿ ನಳಕಿಯ ಹಸಿವಿಗೆ
ಅವರ ಎದಿ ಆಹಾರ ಆತು
ಅದರ ಬಾಯಾರಿಕಿಗೆ ಅವರ
ನೆತ್ತರು ಉದಕ ಆತು

ಸಹಚರರ ಚೂರುಗಳನ್ನು
ಆಯ್ಕೊಂಡು ಗಂಟು ಕಟ್ಕೊಂಡು
ಬಂದರು ಊರಿಗೆ
ಯುದ್ಧ ಮುಗೀತು, ಶಾಂತಿಯ
ಬಿಳಿ ಬಾವುಟ ಹಾರಿಸಿದರು
ಎತ್ತರಕ್ಕ ಹಾರೋ ಧ್ವಜದಾಗಿನ
ರಕ್ತದ ಸಣ್ಣ ಕಲಿಗಳು ಹೆಂಗ ಕಂಡಾವು

ಮಗ ಮನಿಗೆ ಬಂದ
ಯೋದ್ಧ ಅವ ಗುಂಡಿಗಿ ಗಟ್ಟಿ
ಇರತದ ಅಂತ ತಿಳುವಳಿಕೆ
ಗಟ್ಟಿ ಎಲುವಿನ ಹಂದರದೊಳಗ
ಮಿದು ಹೃದಯನೆ ಅಲಾ
ಶಾಂತಿ ಯಾರಿಗೆ ಸಿಕ್ತು ಅನ್ನೂದ
ನನಗ ತಿಳಿವಲ್ತು
ಅದು ನನ್ನ ಕಣ್ಣೀರನ್ಯಾಗ,
ಮಗನ ತಳಮಳಗಳ ಜೊತಿ
ಕರಗಿ ಸಿಗಲಾರದಂಗ ಹಾರಿ ಹೋಗೇತಿ!

‍ಲೇಖಕರು Admin

February 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಚಂದದ ಕವಿತೆ, ಅಭಿನಂದನೆಗಳು ಚೈತ್ರಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: