ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇತನಾ ತೀರ್ಥಹಳ್ಳಿ ಕವಿತೆ: ಸೆಟೆದು ಬಿದ್ದಿವೆ ಪದಗಳು

ಮಾತಾಡೆನೆಂಬ ಮುನಿಸು ಮಂದಿಗೆ…
ಚೇತನಾ ತೀರ್ಥಹಳ್ಳಿ
ಚಿತ್ರ : ಬಾಲು ಮಂದರ್ತಿ
ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?
ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…
ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.
ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?

‍ಲೇಖಕರು avadhi

8 December, 2009

4 Comments

  1. bharath

    ಮುನಿಕೊಂಡ ಮಾತುಗಳೆಲ್ಲಾ ಕವಿತೆಯಾಗಿ ಮೂಡಿದ್ದಾವಲ್ಲಾ…..
    ಚೆನ್ನಾಗಿದೆ ಕಣ್ರೀ.

  2. shashi

    chennagide……….

  3. sharadabooks

    ಏಕಾಂತದ ಹಿಂಸೆ !!!
    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading