– ರವಿ ವರ್ಮ
ಅದರ ಹರಿತ ಕಣ್ಣಿನ ಅಲಗು ಮಾತ್ರ ಇನ್ನು ಅಲ್ಲೇ ಉಳಿದಿತ್ತು . ತುಂಬಾ ಮಾರ್ಮಿಕವಾಗಿದೆ. ಚಿಕ್ಕ ಹಾಗು ಚೊಕ್ಕ ಕವನ .ಕನ್ನಡ ಸಾಹಿತ್ಯದಲ್ಲಿ ಹಾವು ವಿಭಿನ್ನ ಹಾಗು ವಿಶಿಷ್ಟ ಸನ್ನಿವೇಶಗಳಲ್ಲಿ ತುಂಬಾ ಅರ್ಥಪೂರ್ಣವಾಗಿ ,ಸಂಕೇತ ವಾಗಿ ಬಳಕೆಯಾಗಿದೆ. ಕಾರ್ನಾಡರ ನಾಗಮಂಡಲ, ಕಂಬಾರರ ಕಾವ್ಯಗಳಲ್ಲಿ,ಜನಪದ ಹಾಡುಗಳಲ್ಲಿ, ಶರೀಫಾ.ಅವರ “ಹಾವ ತುಳಿದೇನ ಮಾನಿನಿ ” ಹಾಡಿನಲ್ಲಿ……ಹೀಗೆ, ಹುಲಿಷೆಕರ್ ಅವರ “ಹಾವ ಹರದಾಡತಾವ ” ನಾಟಕದಲ್ಲಿ ಈ ಹಾಡು ಇಡೀ ನಾಟಕದ ಚಿತ್ರವನ್ನು ಮುಂದಿಡುತ್ತದೆ .
” ಚೆಲುವೀ ನಿನ್ನಯ ಮನಸು
ಬಿಳೀ ಗೋಡೀ ಇದ್ದಂಗಾ
ಏನೇನು ಕಸರಿಲ್ಲ ಅದರಾಗ
ಏನೂ ಗೊತ್ತಿಲ್ಲದ ಹುಡಿಗಿ
ಏನೇನೂ ಆಗ್ಯಳಾ
ಹರಿದಾಡೋ ಹಾವಿಗೆ ಹಾಲನ್ನು ಕೊಡಾತೀನಿ
ಬಾರಯ್ಯ ಬಾರೋ ಅಂದಾಳ ”
ನಾನು ಬಹು ಹಿಂದೆ ಇಳ್ಕಲ್ನಲ್ಲಿ ನೋಡಿದ ನಾಟಕದ ಹಾಡು ನೆನಪಿಗೆ ಬಂತು. ಇಲ್ಲಿ ಪ್ರಸ್ತುತ ವೆನಿಸಿದ್ದರಿಂದ ನೆನಪುಮಾಡಿಕೊ೦ಡೆ.
]]>
0 ಪ್ರತಿಕ್ರಿಯೆಗಳು