“ಯಾರು ಯಾರು ಎಲ್ಲೆಲ್ಲಿ ಬೇಕಾದರೂ ತೊಳೆದುಕೊಳ್ಳಲಿ; ಅದು ಅವರ ಸಂಸ್ಕಾರ”
-ಪ್ರಕಾಶ್ ರೈ
“ಎಷ್ಟು ವರ್ಷದಿಂದ ತೊಳೀತಾನೇ ಇದ್ದೀರಿ.ಇನ್ನೂ ಸ್ವಚ್ಛವಾಗಿಲ್ಲವೇ ನಿಮ್ಮ ಮನಸ್ಸು?”
– ಮಂಜುನಾಥ.ಸಿ.ನೆಟ್ಕಲ್
“ದನದ ಸೆಗಣಿ ಗಂಜಲಗಳಿಂದ ಮಾಡಿದ ಗಲೀಜನ್ನು ಡೆಟ್ಟಾಲ್ ಹಾಕಿ ಸ್ವಚ್ಛಗೊಳಿಸಿ; ವೈಚಾರಿಕತೆಯಿಂದ ಮನಸ್ಸು ಬುದ್ಧಿಗಳನ್ನು ಸ್ವಚ್ಛಗೊಳಿಸಿ.”
-ಪಂಡಿತಾರಾಧ್ಯ ಮೈಸೂರು
“ಪ್ರಕಾಶ್ ರೈ ಮಾತನಾಡಿದ್ದ ಸ್ಥಳವನ್ನೇ ಸ್ವಚ್ಛ ಮಾಡುವ ಜನ, ಇನ್ನು ಅವರು ಉಸಿರಾಡಿದ ಜಾಗಗಳಿಗೆ ನಾವು ಅದೆಷ್ಟು ಫಿನಾಯಿಲ್ ಸಿಂಪಡಿಸಬೇಕೋ..!!”
-ಜ್ಯೋತಿ ಅನಂತಸುಬ್ಬರಾವ್
ಗೆಳೆಯ ಪ್ರಕಾಶ ರೈ ನಿಂತ ನೆಲವನ್ನು ಮೂರ್ಖ ಗಂಜಲ ಗಿರಾಕಿಗಳು ತೊಳೆದಿದ್ದಾರೆ. ಇದೇ ರೀತಿ 200 ವರ್ಷಗಳ ಹಿಂದೆ ಮಹಾರಾಷ್ಟ್ರದ ಪೇಶ್ವೆಗಳು, ದಲಿತ ಯೋಧ ಸಿದನಾಕ ನಿಂತ ನೆಲವನ್ನು ಗಂಜಲದಿಂದ ಶುದ್ಧೀಕರಣ ಮಾಡಿದ್ದರು. ಅದರ ಪರಿಣಾಮ ಏನಾಯಿತು ಗೊತ್ತಲ್ಲ.
ಮುಂದೆ ನಡೆದ ಕೋರೆಗಾವ್ ಯುದ್ಧದಲ್ಲಿ ಪೇಶ್ವೆಗಳ ಸಾಮ್ರಾಜ್ಯವೇ ನಾಶವಾಗಿ ಹೋಯಿತು.
– ಎಲ್.ಎನ್.ಮುಕುಂದರಾಜ್
ಗೋಮೂತ್ರದ ಬಕೆಟ್ಟು, ಪೊರಕೆ ಹಿಡ್ಕಂಡು, ಪ್ರಕಾಶ್ ರೈ ನಿಂತಲ್ಲಿ, ಕುಂತಲ್ಲಿ, ಹೋಗ್ಬಂದಲ್ಲೆಲ್ಲ ಹಿಂದ್ಗುಂಟ ತಿರುಗ್ತ, ಕಿಲೀನ್ ಮಾಡಕ್ಕೆ ಕಾಯ್ತಾ ನಿಂತಿರೊ ಭಕ್ತರ ಪಾಡು ನೆನಪ್ಮಾಡ್ಕಂಡ್ರೆ ನಗ ಅಂಗಂಗೆ ಉಕ್ಕುಕ್ ಬತ್ತಾಯ್ತೆ ! 😬 😝
-ಚರಿತಾ ಮೈಸೂರು
0 ಪ್ರತಿಕ್ರಿಯೆಗಳು