ಕಳೆದ ವರ್ಷ ನನಸಾದ ನನ್ನ ಕನಸು…..‘ಗುಬ್ಬಿಗೂಡು’
-ಮೀರಾ ರಾಜಗೋಪಾಲ್
ಅಕ್ಕ 2010ರ ಪ್ರಕಟಣೆಗಳಲ್ಲಿ ಹೊರಬಂದ ಎರಡು ಪುಸ್ತಕಗಳು ‘ದೀಪ ತೋರಿದೆಡೆಗೆ’ ಕಥಾ ಸಂಕಲನ ಮತ್ತು ‘ಗುಬ್ಬಿಗೂಡು’ ಮಕ್ಕಳ ಪುಸ್ತಕ. ಈ ಎರಡೂ ಪುಸ್ತಕಗಳನ್ನು ಕುರಿತ ಮಾತುಕತೆ ಈ ದಿನ ನಮ್ಮ ಮನೆಯಲ್ಲಿ ನಡೆಯಿತು…‘ಪ್ರಸ್ತಾಪ’ ವತಿಯಿಂದ. ನ್ಯೂಜೆರ್ಸಿಯ ನಮ್ಮ ಮನೆಯಲ್ಲಿ ನಾವೆಲ್ಲ ಕುಳಿತು, ಸ್ಕೈಪ್ ಮೂಲಕ ಗೋಕರ್ಣದಲ್ಲಿದ್ದ ಜಯಂತ ಕಾಯ್ಕಿಣಿ ಮತ್ತು ಮೈಸೂರಿನಲ್ಲಿದ್ದ ಅಬ್ದುಲ್ ರಶೀದ್ ಅವರನ್ನು ಕಾಣಲು, ಕೇಳಲು, ಅವರೊಂದಿಗೆ ಮಾತಾಡಲು ಸಾಧ್ಯವಾಗಿದ್ದಕ್ಕೆ ತುಂಬಾ ಖುಶಿಯಾಗ್ತಿದೆ.
ಜಗತ್ತು ಇನ್ನೂ ಇನ್ನೂ ಚಿಕ್ಕದಾಗುತ್ತಾ ನಮ್ಮನ್ನೆಲ್ಲ ಹೀಗೇ ಹತ್ತಿರ ತರುತ್ತಿರಲಿ.
ಈ ಪುಸ್ತಕಗಳು ಹೊರಬರಲು ನೆರವಾದ ಎಲ್ಲರನ್ನೂ ನೆನೆಯುತ್ತಾ……..]]>
ಗೋಕರ್ಣದಿಂದ ನ್ಯೂಜೆರ್ಸಿಗೆ ಕಾಯ್ಕಿಣಿ..
ನಿಮಗೆ ಇವೂ ಇಷ್ಟವಾಗಬಹುದು…




0 Comments