ಅದೇ ರಾಗ, ಅದೇ ರೋಗ…
ಕಲಿಗಣನಾಥ ಗುಡದೂರ
ಹಿಂದಿನ ಸಮ್ಮೇಳನ
ರಾಯಚೂರಾಗ,
ಈಗಿನ ಸಮ್ಮೇಳನ
ಮೈಸೂರಾಗ,
ಮುಂದಿನ ಸಮ್ಮೇಳನ
ಧಾರವಾಡದಾಗ,
ಎಲ್ಲೇ ನಡೆದರೂ
ಸಾಹಿತ್ಯ ಸಮ್ಮೇಳನ
ಪರಿಷತ್ತಿನ ಅಧ್ಯಕ್ಷರ
ಬಾಲಬಡಕರಿಗೆ
ಮಾತ್ರ ಸಿಕ್ಕೇ ಸಿಗುತ್ತ
ವೇದಿಕೆಯೊಳಗ
ಸಾಕಷ್ಟು ಜಾಗ!!
Gangadhar Pattar ಜಾಗಕ್ಕಾಗಿ ಹಲ್ಲು ಗಿಂಜೋ ಅಡ್ನಾಡಿ ಜನ ರಾಜಕೀಯ-ಸಾಹಿತ್ಯ ಎರಡೂ ಕಡೇಕೂ ಅದಾರ್ರೀ ಕಲಿಗಣನಾಥ. ಅಸಲೀಗಿಂತ ಈ ನಕಲೀಗಳಿಂದ್ಲೇ ಅಪಾಯ ಜಾಸ್ತೀರೀ. ಏನ್ಮಾಡೋದು ಹೇಳ್ರಿ.ಇದು ಜವಾಬೇ ಇಲ್ಲದಂತಹ ಬ್ಯಾತಾಳ ಸವಾಲ್
Shashikant Kadlur ಮನು ಬಳಿಗಾರ ಸರಕಾರಿ ಅಧಿಕಾರಿಯಷ್ಟೇ ಅಲ್ಲ..ಸರಕಾರಿ ರಾಜಕಾರಣಿನೂ ಹೌದು ಅನ್ನೋದು ಮುಂದಿನ ಸಮ್ಮೇಳನದಾಗೂ ಸಾಬೀತಾಗ್ತಾದ..
Mallikarjun Hulagabali Banhatti ಕಸಾಪ ಅಂದ್ರೆ, ಬಲವುಳ್ಳವರಿಂದ, ಬಲವುಳ್ಳವರಿಗಾಗಿ ಇರುವ ಬಲವುಳ್ಳ ಬಾಲಬಡುಕರ ಸಂಸ್ಥೆ





0 Comments