ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀಚಿದ್ದೆಲ್ಲವೂ ಕವಿತೆಯಲ್ಲ..

-ಸರಸ್ವತಿ ಕೆ ನಾಗರಾಜ್

ಭಾವ ಲಹರಿ

ಗೀಚಿದ್ದೆಲ್ಲವೂ ಕವಿತೆಯಲ್ಲ,
ಕೆಲವೊಮ್ಮೆ ಅದು ಆತ್ಮದ ಬಿಕ್ಕಳಿಕೆ;
ಮಾತಿಗೆ ಮಣಿಯದ ಮೌನದ ಭಾರ,
ಅಕ್ಷರಕ್ಕಿಳಿದಾಗ ಸಿಗುವ ಸಮಾಧಾನದ ತಣಿಕೆ.

ಹೃದಯದ ಗೂಡಲಿ ಬಂಧಿಯಾದ ಭಾವ,
ಶಬ್ದಗಳ ನೆಪದಲ್ಲಿ ರೆಕ್ಕೆ ಬಿಚ್ಚುತ್ತವೆ;
ಹೇಳಲಾಗದ ಸಾವಿರ ನೋವು,ನಲಿವು,
ಸಾಲಿನ ಮಧ್ಯದ ಖಾಲಿ ಜಾಗದಲ್ಲಿ ಅಡಗುತ್ತವೆ.

ಕವಿತೆಯೆಂದರೆ ಬರಿ ಪದಗಳ ಜೋಡಣೆಯಲ್ಲ,
ಅದು ಅಂತರಾತ್ಮದ ಅವ್ಯಕ್ತ ರೋದನೆ;
ಹೇಳಲಾಗದ  ಭಾವನೆಗಳು ಲೇಖನಿಯ ತುದಿಗಿಳಿದಾಗ,
ಅದಕ್ಕೇ ಹೆಸರಿಡುವುದು ಈ ಜಗತ್ತು ‘ಕವನ’ವೆಂದು.

ಅರ್ಥವಾಗದ ಮೌನವೆ ಇಲ್ಲಿ ಹೆಚ್ಚು,
ಆ ಮೌನಕ್ಕೆ ಭಾಷೆಯ ಹಂಗಿಲ್ಲ;
ಮೌನವಾಗಿ ಬರೆಯುವವನ ಎದೆಯ ಭಾರ ಇಳಿದಾಗ ಮಾತ್ರ,
ಅಲ್ಲಿ ಕವಿತೆಯಾಗುತ್ತದೆ,

‍ಲೇಖಕರು Admin

14 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading