ಲಕ್ಷ್ಮಿಕಾಂತ ಇಟ್ನಾಳ್
………..ಏನಾಯ್ತೂಂದ್ರೆ, ನಾವು ಜೋಧಪುರ ಅರಮನೆಯ ಭವ್ಯತೆಯನ್ನು ಮನತಣಿದು ನೋಡಿ, ದಣಿದು, ಅರಮನೆಯ ಇಳಿಜಾರಿನ ಕಲ್ಲು ಚಪ್ಪಡಿ ಹೊದಿಸಿದ ದಾರಿಗುಂಟ ಕೆಳಗಿಳಿಯುತ್ತಿದ್ದೆವು, ಒಂದು ತಿರುವಿನಲ್ಲಿ ಮಾಡಿನಂತಹ ಮೂಲೆಯಲ್ಲಿ ಕುಳಿತು ಸುಶ್ರಾವ್ಯವಾಗಿ ಡ್ರಮ್ಗಗಳನ್ನು ಎದುರು ಬದುರು ನುಡಿಸುತ್ತ ಹಾಡುತ್ತಿದ್ದವ ಮನಸೆಳೆದ. ಬಹಳ ಟ್ರೇನ್ಡ್ ವಾಯ್ಸ್. ಮಧುರ ರಾಜಸ್ಥಾನಿ ಫೋಲ್ಕ್ ಕೇಳಿ ಖುಷಿಯಿಂದ ಬಕ್ಷೀಸು ಕೊಟ್ಟು ಮುಂದೆ ಹೆಜ್ಜೆ ಇಟ್ಟವನಿಗೆ ಆ ಸಂಗೀತಗಾರ ಕೇಳಿದ, ಕಹಾಂ ಸೆ ಆನಾ ಹುವಾ ಸರ್ ಜಿ. ….ನಾನು ಹೇಳಿದೆ, ಬೆಂಗಳೂರು, ಒಹೋ ಸೌಥ್ ಎಂದ.. ಆಪಕಾ ಜಬಾಂ ಮೇಂ ಗಾವೂಂ ಎಂದು ಕೇಳಿದ. ಹುರುಪಿನಿಂದ ಏನು ಹಾಡುವನು ಎಂದು ಕುತೂಹಲದಿಂದ ಹೂಂ’ ಹೇಳಿದೆವು.
‘ಚಲ್ಲಿದರು ಮಲ್ಲಿಗೆಯ ಬಾನಾಸುರು ಏರಿ ಮ್ಯಾಲೆ, ಅಂದದ ಚಂದದ ಮಾಯಕಾರ್ ಮಾದೇವಗೆ ಚಲ್ಲಿದರು ಮಲ್ಲಿಗೆಯ” ಅದೆಂಥ ಶೃತಿಶುದ್ಧತೆ. ದಿಙ್ಮೂಢರಾದೆವು. ಎಲ್ಲಿಯ ಜೋಧಪುರ, ಎಲ್ಲಿಯ ಕನ್ನಡವಾಡು., ಕಣ್ಣಲ್ಲಿ ನಿಜಕ್ಕೂ ಅಶ್ರುತರ್ಪಣವಾಯ್ತು. ಅವನನ್ನು ತಬ್ಬಿ ಅಭಿನಂದಿಸಿದೆ, ಆಪ್ ಜೈಸೆ ಲೋಗ್ ಕಮ್ ಹೀ ಮಿಲ್ತೇ ಹೈಂ ಸರ್ ಜಿ,, … ಎಂದು ಹೇಳಿ ‘ಕೊಯೀ ಏಕ್ ಮೇರೀ ರಾಜಸ್ಥಾನ ಕೀ ಗೀತ ಮಾಲೂಮ್ ಹೈ ಸರ್? ಕೇಳಿದ. ನನಗೂ ತಡೆಯುವುದಾಗಲಿಲ್ಲ, ಅವನ ರಾಜಸ್ಥಾನದ ” ಕೇಸರಿಯಾ ಬಾಲಮ್ ಸಾ, ಆವೋ ….ಪಧಾರೋ …ಮಾರೇ ದೇಶ, …ರೆ…..ಸಾಜನ ಸಾಜನ….. . ”ರಾಗ ಮಾಂಡ್ ದ ತುಣುಕೊಂದನ್ನು ಹಾಡಿದೆ, ಅವನ ಕಣ್ಣಾಲಿಗಳು ತುಂಬಿ ಬಂದು , ಎದ್ದು ಬಂದು ನನ್ನ ಕಾಲಿಗೆ ಉದ್ದಕ್ಕು ಬಿದ್ದು ನಮಸ್ಕರಿಸಿದ. ಅವನಂತಹ ಸಂಗೀತ ಸಾರಥಿಯ ಮುಂದೆ ಬಾಥರೂಂ ಸಿಂಗರ್ ನಾನು. ಅವನಿಗೆ ತನ್ನ ರಾಜಸ್ಥಾನದ ದನಿಯನ್ನು ದಕ್ಷಿಣ ಭಾರತೀಯನೊಬ್ಬನ ಕಂಠದಲ್ಲಿ ಕೇಳಿದ್ದು ತಡೆಯದ ಅಭಿಮಾನ ಉಕ್ಕಿಸಿತ್ತು.
ಅವನ ನೆಲದ ಪ್ರಿತಿಗೆ, ಅವನಿಗೆ ತಬ್ಬಿ ವಂದಿಸಿ, ಮುಂದೆ ಸಾಗಿದೆ. ಇನ್ನೂ ಏನೇನು ಅನುಭವ ವಾಗಲಿದೆಯೋ ಎಂಬ ಯೋಚನೆಯಲ್ಲಿ ಆಶ್ಷರ್ಯದೊಂದಿಗೆ. …
This is unity in diversity. Thanks to Itnal
ಅಭಿಮಾನನೇ ಹಾಗೇ ನಿಜಕ್ಕೂ ಅದ್ಬುತ…ನಿಮ್ಮ ಲೇಖನ ಓದಿ ನಮ್ಗೂ ಅಭಿಮಾನ…
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
’ಗಾನಕೆ ಒಲಿಯದ ಮನಸೆ ಇಲ್ಲ’ ಮನ ಮಿಡಿದ ಒಂದು ಹೃದಯಸ್ಪರ್ಶಿ ಬರಹ, ಇಬ್ಬರು ಕಲಾರಾಧಕರ ಉತ್ತರ ಮತ್ತು ದಕ್ಷಿಣಗಳ ಹೃದಯ ಸಮ್ಮಿಲನ. ಚಿತ್ರಗಳು ಮುದ ನೀಡಿದವು ಆತ ಹಾಡಿದ ಕನ್ನಡ ತಾವು ಗುನುಗುಟ್ಟಿದ ರಾಜಸ್ಥಾನಿ ಗಾನದ ತುಣುಕು ಮನಃಪಟಲದ ಮೇಲೆ ಬಿಚ್ಚಿಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದವು.
ಗಾನದ ಗುಂಗಿಗೆ ಗಡಿಗಳ ಗೀಳಿಲ್ಲ -ತುಂಬಾ ಚೆನ್ನಾಗಿದೆ