ದಿಶಾ ಗುಲ್ವಾಡಿ
ಬಿಸಿಲ ತುಣುಕೊಂದು ಸಿಂಗರಿಸಿಕೊಳ್ಳಲು
ಮಳೆ ಕನ್ನಡಿ ಹಿಡಿಯಿತು ಬಿಸಿಲು ಮಳೆಬಿಲ್ಲಾಯಿತು
ಕುದಿದು, ಹಬೆಯಾಗಿ, ತೊಟ್ಟಿಕ್ಕಿ,ತಳಸೇರಿ, ತಣಿದು,
ಹೊರಬಿದ್ದ ನೋವುಮತ್ತೆ ಜಾರುತಿದೆ
ಹನಿಯಾಗಿ ಹರಳುಗಟ್ಟಿಸುವ ಜನರ ಮಧ್ಯೆ…
ನೆನೆದಷ್ಟೂ ಹರಳುಗಟ್ಟುವ ನೋವನ್ನ ತಂದು ಅಂಗಳದಲ್ಲಿಟ್ಟಿದ್ದೇನೆ
ಹೂ ಬಿಸಿಲಿಗೆ ಸೋಕಿ ಹನಿಯಾಗಿಹಿಡಿ ಮಣ್ಣನ್ನ ತೇವಗೊಳಿಸಲೆಂದು
ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ
ಕರಿಮಣಿಯೆಂಬುದು, ಅವನು ಅವಳೆದೆಯ
ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು
ಮೋಡಕ್ಕೆ ಭೂಮಿ ಚುಂಬಿಸುವ ಬಯಕೆ,
ನಡುವಿನ ಆಕಾಶ ಒದ್ದೆಯಾಯಿತು..
ನೆನೆದಷ್ಟೂ ಗಾಢವಾಗುವ ನೋವುಗಳಿಗೆಲ್ಲ
ಸುಣ್ಣ ಹಚ್ಚಿಬಿಡಿ ಹೊಸ ಚಿತ್ತಾರ ಬರೆಯಬೇಡಿ.
ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ
ಅದ್ಬುತ ಸಾಲು
ಧನ್ಯವಾದಗಳು
-ದಿಶಾ ಗುಲ್ವಾಡಿ
ಚೆನ್ನಾಗಿದೆ.
ಧನ್ಯವಾದಗಳು
vishadada naduve u jeevena Preetiyannu , ukki hariuva manasugalannu kavite yalli bandisalagide…
thanks for the poet with regards.
ಧನ್ಯವಾದಗಳು☺
ಕರಿಮಣಿಯೆಂಬುದು,ಅವನು ಅವಳೆದೆಯ ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು…ಪದಗಳ ಪೋಣಿಸಿದ ರೀತಿ ಗೆಳೆಯ ಕರಿಮಣಿ ಕಟ್ಟು ಹಿಡಿದು ಓಡಿಬರುವಂತಿದೆ.
ಧನ್ಯವಾದಗಳು☺
ಕರಿಮಣಿಯೆಂಬುದು, ಅವನು ಅವಳೆದೆಯ
ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು
ಮುದ್ದು ಭಾವಗಳ, ಸಾಲುಗಳು,,,,,,,, ಇದಕ್ಕಿಂತ ಇನ್ನೆಂತಹ ಸಾಲುಬೇಕು ಮದುವೆಯ ಭಾವ ಅರಿಯಲು
ಧನ್ಯವಾದಗಳು ನವೀನ್.