ಗಾಂಧಾರಿ ತುಣುಕುಗಳು             

       

 

 

ದಿಶಾ ಗುಲ್ವಾಡಿ  

 

 

 

 

ಬಿಸಿಲ ತುಣುಕೊಂದು ಸಿಂಗರಿಸಿಕೊಳ್ಳಲು

ಮಳೆ ಕನ್ನಡಿ ಹಿಡಿಯಿತು ಬಿಸಿಲು ಮಳೆಬಿಲ್ಲಾಯಿತು

ಕುದಿದು, ಹಬೆಯಾಗಿ, ತೊಟ್ಟಿಕ್ಕಿ,ತಳಸೇರಿ, ತಣಿದು,

ಹೊರಬಿದ್ದ ನೋವುಮತ್ತೆ ಜಾರುತಿದೆ

ಹನಿಯಾಗಿ ಹರಳುಗಟ್ಟಿಸುವ ಜನರ ಮಧ್ಯೆ…

ನೆನೆದಷ್ಟೂ ಹರಳುಗಟ್ಟುವ ನೋವನ್ನ ತಂದು ಅಂಗಳದಲ್ಲಿಟ್ಟಿದ್ದೇನೆ

ಹೂ ಬಿಸಿಲಿಗೆ ಸೋಕಿ ಹನಿಯಾಗಿಹಿಡಿ ಮಣ್ಣನ್ನ ತೇವಗೊಳಿಸಲೆಂದು

ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ

ಕರಿಮಣಿಯೆಂಬುದು, ಅವನು ಅವಳೆದೆಯ

ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು

ಮೋಡಕ್ಕೆ ಭೂಮಿ ಚುಂಬಿಸುವ ಬಯಕೆ,

ನಡುವಿನ ಆಕಾಶ ಒದ್ದೆಯಾಯಿತು..

ನೆನೆದಷ್ಟೂ ಗಾಢವಾಗುವ ನೋವುಗಳಿಗೆಲ್ಲ

ಸುಣ್ಣ ಹಚ್ಚಿಬಿಡಿ ಹೊಸ ಚಿತ್ತಾರ ಬರೆಯಬೇಡಿ.

‍ಲೇಖಕರು admin

August 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Sasashiv soratur

    ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ

    ಅದ್ಬುತ ಸಾಲು

    ಪ್ರತಿಕ್ರಿಯೆ
  2. chi na hally kirana

    vishadada naduve u jeevena Preetiyannu , ukki hariuva manasugalannu kavite yalli bandisalagide…
    thanks for the poet with regards.

    ಪ್ರತಿಕ್ರಿಯೆ
  3. Vijaykumar wadawadagi

    ಕರಿಮಣಿಯೆಂಬುದು,ಅವನು ಅವಳೆದೆಯ ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು…ಪದಗಳ ಪೋಣಿಸಿದ ರೀತಿ ಗೆಳೆಯ ಕರಿಮಣಿ ಕಟ್ಟು ಹಿಡಿದು ಓಡಿಬರುವಂತಿದೆ.

    ಪ್ರತಿಕ್ರಿಯೆ
  4. ನಿಮ್ಮ ಪ್ರೀತಿಸುವ ಜೀವಾ

    ಕರಿಮಣಿಯೆಂಬುದು, ಅವನು ಅವಳೆದೆಯ

    ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು

    ಮುದ್ದು ಭಾವಗಳ, ಸಾಲುಗಳು,,,,,,,, ಇದಕ್ಕಿಂತ ಇನ್ನೆಂತಹ ಸಾಲುಬೇಕು ಮದುವೆಯ ಭಾವ ಅರಿಯಲು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: