ಖಾಲಿ ಬದುಕಿನ ಖಾಲಿ ಪಯಣ!

ಸಂತೆಬೆನ್ನೂರು ಫೈಜ್ನಟ್ರಾಜ್

ತಿಕ್ಕಿ,ತಿಕ್ಕಿ
ತೊಳೆದರು
ಮೈ ತುಂಬಾ ಸುಗಂಧ ಪೂಸಿದರು
ಮೆಲ್ಲ ಮಲಗಿಸಿ
ಗುಲಾಬಿಗಳಿಂದ ಸಿಂಗರಿಸಿದರು
ಒಬ್ಬೊಬ್ಬರೇ ಮುಂದಾಗಿ
ಹಿಂದೆ ಮುಂದೆ ಹೆಗಲಿಗೆ ಹೆಗಲಾದರು
ದಾರಿ ತುಂಬಾ ಮೌನ
ಹೊದ್ದು ತಲೆಯಲೇನೋ ಹೊತ್ತು ನಡೆದರು
ಖಬರಸ್ತಾನದಿ ಇಳಿಸಿ
ಕಡೆಗೊಮ್ಮೆ ಎಂಬಂತೆ ಮುಖ ನೋಡಿದರು
ಸಿಂಗರ ಪಕ್ಕ ಸರಿಸಿ
ಮೈಯಷ್ಟೇ ಮಣ್ಣಲಿಳಿಸಿ ಹಿಡಿ ಮಣ್ಣ ಕೊಟ್ಟರು
ನೋಡ- ನೋಡುತ್ತ ಮೈ
ಮಣ್ಣ ಪಾಲಾಗಿಸಿ ಸುಮ್ಮನೆ ನಡೆದರು
ಕಡೇ ಪಕ್ಷ ಒಂದು ಗುಲಾಬಿ
ಯಾದರೂ ಎದೆ ಮೇಲಿಡದಾದರು
ಇಷ್ಷೆ; ಖಾಲಿ ಬಂದ ನಾವು
ಖಾಲಿಯೇ ನಡೆಯಬೇಕೆಂದು ತಿಳಿಸಿ ಹೋದರು!

ಕೈಯ ಕುಡುಗೋಲು

ಮಣ್ಣ ಪಾಟಲಿದ್ದ ಹಳೇ ಮಣ್ಣ
ಅಗೆದು ತೆಗೆಯುತ್ತಿದ್ದೆ
ಮಣ್ಣ ಕೆಳಗೆ ಮತ್ತೆ
ಮಣ್ಣು
ಅದರಾಳದಲ್ಲಿ ಎಂದೋ ಹೂತಿಟ್ಟ
ಬೀಜ ಬೇರು
ಬಿಟ್ಟುಕೊಂಡು
ಹಳೇ ರೋಗಿಯಂತೆ
ಮಂದ ಉಸಿರಾಡುತ್ತಿತ್ತು;
ಕೀಳಲಾ
ಬಿಡಲಾ
ಹೊಸ ಬೀಜ ಬಿತ್ತಲಾ
ಬೇರೆ ಹಾಕಲಾ
ದ್ವಂದ್ವ ಕಾಡಿದರೆ
ಅಗೆವ ಕುಡುಗೋಲು ನನ್ನ
ಮುಖವ ದಿಟ್ಟಿಸುತ್ತಿತ್ತು;
ಆಗಲೇ
ಎಲ್ಲೋ ಹೋಗಿದ್ದ ಅಪ್ಪ
ಮೆಲು ಹೆಜ್ಜೆ ಹಾಕಿ ಒಳ ಬಂದರು,
ಕಂಡರು” ಬಿಡಪ್ಪ ಹಸಿರಾಗುತ್ತೆ ಒಂದಿಷ್ಟು ಗೊಬ್ಬರ
ಹಾಕಿ ನೀರ ಹನಿಸು ನಾ ಇರಂಗೇ ಇರ್ತದೆ”
ನಾ ಅಷ್ಟ್ ಮಾಡಿ ಎದ್ ಹೋದೆ
ಕೈಯ ಕುಡುಗೋಲು
ನೆಲ ನೋಡುತ್ತಿತ್ತು!

 

‍ಲೇಖಕರು Avadhi GK

February 20, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. SRINIVASA MURTHY

    Both the poems are very thought provoking.
    First poem shows the relative meaningless of life, while the second one creates a feeling of hope for regeneration.
    Very well crafted.
    Much appreciated for sharing this.

    ಪ್ರತಿಕ್ರಿಯೆ
  2. ಅಮರದೀಪ್. ಪಿ.ಎಸ್.

    ಚೆಂದಗಿವೆ ಪದ್ಯಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: