ಸಜ್ಜನ ಪತ್ರಕರ್ತ, ದೂರದರ್ಶನ, ಯೋಜನಾ, ಚಲನಚಿತ್ರ ಪ್ರಮಾಣ ಮಂಡಳಿ ಹೀಗೆ ಅನೇಕ ಮಾಧ್ಯಮ ಸಂಸ್ಥೆಗಳನ್ನು ಮನ್ನಡೆಸಿದ ಕೆ ಎಸ್ ಅಚ್ಯುತನ್ ಅವರಿಗೆ ಅವರ ಗೆಳೆಯರ ಬಳಗ ನುಡಿ ನಮನ ಸಲ್ಲಿಸಿತು.
ಮಾನವೀಯತೆಯ ಪ್ರತಿಪಾದಕರಾಗಿದ್ದ ಅಚ್ಯುತನ್ ಅವರನ್ನು ಅವರ ಜೊತೆ ಕೆಲಸ ಮಾಡಿದವರು, ಅವರ ಮಾರ್ಗದರ್ಶನ ಪಡೆದವರು, ಅವರ ಗೆಳೆಯರು, ಬಂಧುಗಳು ನೆನಪಿಸಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್, ಅಚ್ಯುತನ್ ಅವರ ಮಗಳು ಸ್ಮಿತಾ, ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್ ಬಿ ದಿನೇಶ್, ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ಧರಾಜು, ವೈ ಕೆ ಮುದ್ದುಕೃಷ್ಣ, ಎಂ ಬಿ ಜಯರಾಂ, ಹಿರಿಯ ಪತ್ರಕರ್ತರುಗಳಾದ ಪಿ ಆರ್ ರಾಮಯ್ಯ, ಸಂಯುಕ್ತ ಕರ್ನಾಟಕದ ಸಂಪಾದಕರಾದ ಹುಣಸವಾಡಿ ರಾಜನ್, ಆರ್ ಜಿ ಹಳ್ಳಿ ನಾಗರಾಜ್, ಎಚ್ ಆರ್ ಶ್ರೀಶ, ಗಾಯತ್ರಿ ಚಂದ್ರಶೇಖರ್, ಸುದ್ದಿಮೂಲದ ಬಸವರಾಜ ಸ್ವಾಮಿ, ಎಂ ಕೆ ಭಾಸ್ಕರ ರಾವ್, ಡೆಕ್ಕನ್ ಹೆರಾಲ್ಡ್ ನ ಅನಿತಾ ಪೈಲೂರು, ಎಂ ಕೆ ಶಾರದಾ, ಕವಿತಾ ಸೇರಿದಂತೆ ಹಲವಾರು ಮಾತನಾಡಿದರು.
Wish he was around to see this fanfare..
Nice pics
Very well organised event and captured the precious sentiments of so many luminaries . The event was captured very well. Thank you very much .