ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಕಡಲ ಜ್ಯೋತಿಯೆ ನೀ..

vijayalakshmi-c-police-biradar

ವಿಜಯಲಕ್ಷ್ಮಿ ಸಿ  

ಕಡಲ ಜ್ಯೋತಿಯೆ ನೀ,

ಇಲ್ಲವೇ ಉರಿಯುವ ಜ್ವಾಲೆಯೆ ನೀ!!

ಸಾಗರದ ಅಲೆಗಳ ಏರಿಳಿತಕೆ ಪ್ರತಿಕ್ರಿಯೆಯೇ ನಿನ್ನ ನರ್ತನ,

ಇಲ್ಲವೇ ಬೀಸುವ ಚಾಮರದ ಸ್ಪರ್ಶದಿ ತಂದ ನಾಚಿಕೆಯ ರೂಪವೇ ಆ ನಿನ್ನ ಬಿನ್ನಾಣ??

ಕಡಲ ಒಡಲಾಳದಲ್ಲಿ ಆಡುವ ಜೀವಗಳಿಗೆ ದಾರಿ ದೀಪವೋ ನೀನು,

ತೇಲುವ ಹಡಗಿನ ಮಡಿಲ ಸುಡುವ ಬೆಂಕಿಯೋ ನೀನು..

ಮುಸ್ಸಂಜೆಯ ಭಾನುವೇ ನಾಚಿ ಬಾನಿಂದ ಮರೆಯಾಗುವಂತೆ ಮಿನುಗಿದೆ ನಿನ್ನ ಕಾಂತಿ..

ನೋಡುವ ನಯನಗಳಿಗಂತು ಅದ್ಭುತ ಬಿಂಬ ನೀರೊಳಗಿನ ಆ ನಿನ್ನ ಪ್ರತಿಬಿಂಬ..

‍ಲೇಖಕರು Admin

26 October, 2016

1 Comment

  1. Gayatri Badiger, Dharwad

    super dr

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading