ಅಕ್ಷಯ ಆರ್. ಶೆಟ್ಟಿ, ಮಂಗಳೂರು.
on June 14, 2021 at 11:49 PM
ಒಂದು ಒಳ್ಳೆಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ ಅವಧಿ ಮತ್ತು ಬಹುರೂಪಿ ಬಳಗಕ್ಕೆ ತುಂಬು ಹೃದಯದ ಧನ್ಯವಾದ. ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೆಸರು ಹೇಳದೆಯೇ ಪೆÇ್ರಫೆಸರ್ ಎಂದಷ್ಟೆ ನಾವೆಲ್ಲ ಶಿಷ್ಯವೃಂದ ಹೆಮ್ಮೆಯಿಂದ ಗುರುತಿಸುವ ಪೆÇ್ರ. ಬಿ.ಎ. ವಿವೇಕ ರೈಯವರ ಮಾತುಗಳನ್ನು, ಅದರ ಆಳ ಅಗಲ ವಿಸ್ತಾರದೊಡನೆ ಕೇಳಿಸಿಕೊಳ್ಳುವುದೆಂದರೆ ಒಂದು ಉತ್ತಮ ಕೃತಿಯನ್ನು ಓದಿದ ಹಾಗೆ. ಕಿರಿಯರನ್ನು ಬೆಳೆಸುವ ಮತ್ತು ಓದಿನೆಡೆಗೆ ಸೆಳೆಯುವಂತೆ ಮಾಡುವ ಅವರ ಮಾತು ಮತ್ತು ಅನುವಾದ-ಸಾಹಿತ್ಯ-ಸಂಶೋಧನೆಯ ಅವರ ಕೆಲಸಗಳು ಹಾಗೂ ಇವತ್ತಿಗೂ ಅವರ ಓದಿನ ತಲ್ಲೀನತೆ, ಸಾಹಿತ್ಯ ಚಟುವಟಿಕೆ – ಈ ಎಲ್ಲವೂ ನಮಗೆಲ್ಲ ಆದರ್ಶಪ್ರಾಯವಾಗುವಂತದ್ದು. ಇವುಗಳಾಚೆ, ಬೌದ್ಧಿಕ ಹಿರಿತನದ ಜೊತೆಗೆ ಸಂವಹನ ಮಾಡಲು ನಾವು ಕಿರಿಯರು ಹಿಂಜರಿಯುವ ಹೊತ್ತು ಆ ಸಂಕೋಚ ಸೋಕದ ಹಾಗೆ ಪೆÇ್ರಫೆಸರ್ ನಿರ್ಮಾಣ ಮಾಡುವ ಆತ್ಮೀಯ ವಾತಾವರಣ ಅವರ ವ್ಯಕ್ತಿತ್ವಕ್ಕೆ ಮುಕುಟಪ್ರಾಯವಾದುದು.
ವಿಚಾರಪೂರ್ಣ ಸಂವಾದ ಆಯೋಜಿಸಿದ ಸಂಘಟಕರಿಗೆ ಮತ್ತೊಮ್ಮೆ ವಂದನೆಗಳು.
ಒಂದು ಒಳ್ಳೆಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ ಅವಧಿ ಮತ್ತು ಬಹುರೂಪಿ ಬಳಗಕ್ಕೆ ತುಂಬು ಹೃದಯದ ಧನ್ಯವಾದ. ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೆಸರು ಹೇಳದೆಯೇ ಪೆÇ್ರಫೆಸರ್ ಎಂದಷ್ಟೆ ನಾವೆಲ್ಲ ಶಿಷ್ಯವೃಂದ ಹೆಮ್ಮೆಯಿಂದ ಗುರುತಿಸುವ ಪೆÇ್ರ. ಬಿ.ಎ. ವಿವೇಕ ರೈಯವರ ಮಾತುಗಳನ್ನು, ಅದರ ಆಳ ಅಗಲ ವಿಸ್ತಾರದೊಡನೆ ಕೇಳಿಸಿಕೊಳ್ಳುವುದೆಂದರೆ ಒಂದು ಉತ್ತಮ ಕೃತಿಯನ್ನು ಓದಿದ ಹಾಗೆ. ಕಿರಿಯರನ್ನು ಬೆಳೆಸುವ ಮತ್ತು ಓದಿನೆಡೆಗೆ ಸೆಳೆಯುವಂತೆ ಮಾಡುವ ಅವರ ಮಾತು ಮತ್ತು ಅನುವಾದ-ಸಾಹಿತ್ಯ-ಸಂಶೋಧನೆಯ ಅವರ ಕೆಲಸಗಳು ಹಾಗೂ ಇವತ್ತಿಗೂ ಅವರ ಓದಿನ ತಲ್ಲೀನತೆ, ಸಾಹಿತ್ಯ ಚಟುವಟಿಕೆ – ಈ ಎಲ್ಲವೂ ನಮಗೆಲ್ಲ ಆದರ್ಶಪ್ರಾಯವಾಗುವಂತದ್ದು. ಇವುಗಳಾಚೆ, ಬೌದ್ಧಿಕ ಹಿರಿತನದ ಜೊತೆಗೆ ಸಂವಹನ ಮಾಡಲು ನಾವು ಕಿರಿಯರು ಹಿಂಜರಿಯುವ ಹೊತ್ತು ಆ ಸಂಕೋಚ ಸೋಕದ ಹಾಗೆ ಪೆÇ್ರಫೆಸರ್ ನಿರ್ಮಾಣ ಮಾಡುವ ಆತ್ಮೀಯ ವಾತಾವರಣ ಅವರ ವ್ಯಕ್ತಿತ್ವಕ್ಕೆ ಮುಕುಟಪ್ರಾಯವಾದುದು.
ವಿಚಾರಪೂರ್ಣ ಸಂವಾದ ಆಯೋಜಿಸಿದ ಸಂಘಟಕರಿಗೆ ಮತ್ತೊಮ್ಮೆ ವಂದನೆಗಳು.