ಸ್ಮೈಲ್ ಪ್ಲೀಸ್ : ದೇವನೂರ ಮಹಾದೇವ
ವಡ್ಡಗೆರೆ ಚಿನ್ನಸ್ವಾಮಿ
ಮೊದಲೇ ಹೇಳಿ ಬಿಡುತ್ತೇನೆ ನಾನೊಬ್ಬ ಅಲೆಮಾರಿ. ನನ್ನ ಬದುಕೆ ಒಂದು ವಿಸ್ಮಯಗಳ ಸರಮಾಲೆ.
ಸಧ್ಯದಲ್ಲೇ ‘ಪಾಪಣ್ಣ ವಿಜಯ’ ಎಂಬ ನನ್ನದೊಂದು ಪುಟ್ಟ ಪುಸ್ತಕ ಪ್ರಕಟವಾಗಲಿದೆ.
ಆ ಪುಸ್ತಕದಲ್ಲಿ ಬಳಸುವ ನನ್ನ ಭಾವಚಿತ್ರವನ್ನು ನನ್ನ ಮೆಚ್ಚಿನ ಲೇಖಕ ದೇವನೂರ ಮಹಾದೇವ ತಾವೇ ತೆಗೆದು ಕೊಡುವುದಾಗಿ, ಪುಸ್ತಕದಲ್ಲಿ ಚಿತ್ರ :ದೇಮ ಎಂದೂ ಹಾಕಬೇಕೆಂದು ಹೇಳಿದರು. ನನಗೆ ಆಕಾಶಕ್ಕೆ ಮೂರೇ ಗೇಣು ಎನ್ನುವಂತಾಯಿತು.
ಕಳೆದ 20 ವರ್ಷಗಳಿಂದಲ್ಲೂ ನನ್ನನ್ನು ಬಲ್ಲ ದೇಮ ಅವರಿಗೆ ನನ್ನ ಹೈಲಾಟಗಳೆಲ್ಲವೂ ಗೊತ್ತು . ಆದರೂ ನನ್ನ ಮೇಲಿನ ಪ್ರೀತಿ ಮತ್ತು ವಿಶ್ವಾಸ ಎಳ್ಳಷ್ಟು ಕಡಿಮೆಯಾಗಿಲ್ಲ. ಇಂತಹವರ ಪ್ರೀತಿಯೇ ನೈತಿಕವಾಗಿ ಸರಿ ದಾರಿಯಲ್ಲಿ ಇರಲು ಎಚ್ಚರಿಕೆಯಾಗಿ ಕಾಯುತ್ತಿದೆ.
ಅಂಶಿ ಪ್ರಸನ್ನಕುಮಾರ್, ಜೈನಳ್ಳಿ ಸತ್ಯ ನಾರಯಣಗೌಡ , ಮೈಸೂರು ಮೀನಾ ಮೇಡಂ ಕುತೂಹಲದಿಂದ ನೋಡುತ್ತಿದ್ದಾರೆ. ಅನಿರೀಕ್ಷಿತವಾಗಿ ಬರುವ ಇಂತಹ ಸಂತಸಗಳಿಂದಲೇ ಬದುಕೆಂಬ ಹಡಗು ಮುಳುಗದೆ ತೇಲುತ್ತಲೇ ಸಾಗಿದೆ..
0 ಪ್ರತಿಕ್ರಿಯೆಗಳು