ಹುರ್ರಾ ! ಒಂದು ಸಣ್ಣ ಶೋಧ.
ಬಹಳ ದಿನಗಳಿಂದ ಹುಡುಕಾಡುತ್ತಿದ್ದರೂ ಸಿಗದ ಈ ಕಿರು ಹೊತ್ತಿಗೆ ನಿನ್ನೆ ಕೈಗೆ ಸಿಕ್ಕಿತು.
ಚಿರಸ್ಮರಣೆ ಓದುವವರಿಗೆ ಅತ್ಯವಶ್ಯ ಓದು.
ನಿರಂಜನರೇ ಬರೆದದ್ದು.
ಇಡೀ ಮಲಬಾರ್ ನಲ್ಲಿ ನಡೆಯುತ್ತಿದ್ದ ರೈತರ ಭೀಕರ ಶೋಷಣೆಯ ಸ್ವರೂಪದ ಚಿತ್ರಣ. ಜೊತೆಗೆ 1928 ರಲ್ಲಿ ಆರಂಭವಾಗಿ 15 ವರ್ಷಗಳ ಕಾಲ ಬೆಳೆದು ಬಲಿತ ಹೋರಾಟದ ಹಿನ್ನೆಲೆಯ ಸಂಕ್ಷಿಪ್ತ ವಿವರಣೆ.
ಚಿರಸ್ಮರಣೆಯ ಚಿರಸ್ಮರಣೀಯ ಕಯ್ಯೂರು ಹೋರಾಟದ ಬಗ್ಗೆ ಈ ಕಿರು ಪುಸ್ತಕವನ್ನು ಬರೆದದ್ದು ಸಾಂಸ್ಕೃತಿಕ ಲೋಕದಲ್ಲಿ ಇತಿಹಾಸ ನಿರ್ಮಿಸಿದ ಸಮುದಾಯ ಸಾಂಸ್ಕೃತಿಕ ಜಾಥಾದ ಎರಡನೆಯ ಆವೃತ್ತಿ ರೈತನತ್ತ ಜಾಥಾದ ಸಮಯದಲ್ಲಿ. 1981 ರಲ್ಲಿ.
ನರಗುಂದದ ರೈತ ಬಂಡಾಯ ಸ್ಫೋಟಗೊಂಡ ಆ ಸ್ಫೂರ್ತಿಯಲ್ಲಿ.
” ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ ” ಸಂದರ್ಭದಲ್ಲಿ ಹೋರಾಟದ ಹಿನ್ನೆಲೆಯನ್ನು ಪರಿಚಯಿಸಲು ಹಲವು ಪುಸ್ತಕಗಳನ್ನು ತಡಕಾಡಬೇಕಾಯಿತು. ಆದರೆ ನಿರಂಜನರು ಅದನ್ನು ಮೂರು ದಶಕಗಳ ಹಿಂದೆಯೇ ಸಾಕಷ್ಟು ಶೋಧ ಮಾಡಿ ಈ ಕಿರು ಹೊತ್ತಿಗೆ ರಚಿಸಿದ್ದಾರೆ.
ಚಿರಸ್ಮರಣೆಯಿಂದ ಸ್ಫೂರ್ತಿ ಪಡೆದವರು ಈ ಹೊತ್ತಿಗೆ ಓದಲು ಮರೆಯದಿರಿ.
ಚಿರಸ್ಮರಣೆಯ ಮುಂದಿನ ಮರು ಮುದ್ರಣದಲ್ಲಿ ಪುಸ್ತಕದ ಕೊನೆಯಲ್ಲಿ ಸೇರ್ಪಡೆಯಾಗಬೇಕಾದದ್ದು .
ಕಯ್ಯೂರು ವೀರರ ಮರಣ ದಂಡನೆಯ ನಂತರ ಕೇರಳದ ಮೂಲೆ ಮೂಲೆಗಳಲ್ಲಿ ಸಹಸ್ರ ಸಹಸ್ರ ಕಂಠಗಳಲ್ಲಿ ಮೊಳಗಿದ ಹಾಡು.
“ಅದೋ ಕೇಳಿ ನಾಡವರೇ
ದೂರದಿಂದ ಬರುತಲಿರುವ
ತೂಗುಗಂಬದ ವೀರ ಕರೆ
ಕಿವಿಕೊಡಿ ಬಾಂಧವರೇ
ಕಠಿಣ ತ್ಯಾಗದ ಪವಿತ್ರ ಪುಲಕದ
ರೋಮಾಂಚಕರ ನಾದಕೆ.”
ರಚನೆ: 1942. ಕ್ರಾಂತಿ ಕವಿ ಸ್ವತಃ ರೈತ ಚಳುವಳಿಗಾರರೂ ಆಗಿದ್ದ ಟಿ.ಸುಬ್ರಹ್ಮಣ್ಯ ತಿರುಮುಂಬು.
ಮಲಯಾಳಂ ನಿಂದ ಅನುವಾದ ನಿರಂಜನ.
0 ಪ್ರತಿಕ್ರಿಯೆಗಳು