ಕೈಫಿ ಆಜ್ಮಿಯೂ.. ಆ ರಾಮನೂ..

ಎರಡನೇ ವನವಾಸ

ಕೈಫಿ ಆಜ್ಮಿ

ಕನ್ನಡಕ್ಕೆ : ಚಿದಂಬರ ನರೇಂದ್ರ 

ವನವಾಸ ಮುಗಿಸಿ ಶ್ರೀರಾಮ ಮರಳಿ ತನ್ನೂರಿಗೆ ಓಡಿ ಬಂದ
ಬಂದವನ ಬೆಂಬಿಡದೆ ಕಾಡಿತು, ಕಾಡಿನ ಅಪಾರ
ಆನಂದ

ಆ ಹುಚ್ಚು ಉನ್ಮಾದ ಅಂಗಳದಲ್ಲಿ ಶ್ರೀರಾಮ ನೋಡಿರಬೇಕು
ಡಿಸೆಂಬರ್ ಆರಕ್ಕೆ ರಾಮನ ಮನ ಹೀಗೆ ನೊಂದಿರಬೇಕು

ಎಲ್ಲಿದ್ದರು ಇವರು? ಎಲ್ಲಿಂದ ಬಂದರು ಈ ಭಕ್ತ ಮಹಾಶಯರು ?

ಹೊಳೆಯುತ್ತಿತ್ತು ಅಯೋಧ್ಯೆಯ ನೆಲ ಶ್ರೀರಾಮ ಕಾಲೂರಿದಲ್ಲೆಲ್ಲ
ಮೈಮುರಿಯುತ್ತಿತ್ತು ಪ್ರೇಮದ ನದಿ ಸೀತೆ ಕಣ್ಚಾಚಿದಲ್ಲೆಲ್ಲ.

ಯಾವಾಗಿನಿಂದ ದ್ವೇಷದ ತಿರುವು ಈ ಪ್ರೀತಿಯ ದಾರಿಯಲ್ಲಿ?

ಏನವರ ಜಾತಿ, ಧರ್ಮ ಯಾವುದು, ನಿಮಗಾರಿಗಾದರೂ ಗೊತ್ತೆ?
ರಾತ್ರಿ ಹೊತ್ತಿ ಉರಿಯದಿದ್ದರೆ ಆ ಮುಖಗಳ ಚೂರು ಕಾಣಬಹುದಿತ್ತೆ ?

ಮನೆ ಸುಡಲು ರಾತ್ರಿ ನನ್ನ ಬಾಗಿಲಿಗೆ, ಧಾವಿಸಿ ಬಂದವರೇ
ನಿಮ್ಮ ಚೂರಿಗಳು ಶಾಖಾಹಾರಿ ಮರೆತಿರಾ ಗೆಳೆಯರೇ

ನಿಮ್ಮ ಕಲ್ಲೆನೋ ಬಾಬರನನ್ನು ಹುಡುಕಿಕೊಂಡು ಹೋಯ್ತು
ತಪ್ಪು ನನ್ನ ತಲೆಯದೇ, ಗಾಯ ಹುಡುಕಿಕೊಂಡು ಬಂತು.

ಕಾಲಿಟ್ಟಿರಲಿಲ್ಲ ರಾಮ ಇನ್ನೂ ಸರಯೂ ನದಿಯಲ್ಲಿ
ಹರಿದು ಬಂದವು ರಕ್ತದ ಕಲೆ ನೀರಿನ ಜೊತೆಯಲ್ಲಿ

ಕಾಲ್ತೊಳೆಯದೇ ಎದ್ದ ಶ್ರೀರಾಮ ಸರಯೂ ತಟದಿಂದ

” ಯಾಕೋ ಈ ಊರಿನ ಹವೆ ಒಗ್ಗುತ್ತಿಲ್ಲ,
ಮನೆ ಹೊರಗಾಯಿತೆ, ವನವಾಸ ಮತ್ತೆ ಶುರುವಾಯಿತಲ್ಲ

‍ಲೇಖಕರು avadhi

December 6, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G Narayana

    When does the Hatred and Violence replace Love and affection of Lord Sri Rama and Mata Sita??? Introspect honestly

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: