ಕೆಂಪಮ್ಮನ ಕೋರ್ಟ್ ಕೇಸ್ ಇದೊಂದು ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಿನಿಮಾ. ತೀರ್ಪು ನೀಡುವುದು ವಿಳಂಬ ಆದರೆ ತೀರ್ಪು ದಕ್ಕದ ಹಾಗೆ ಜಸ್ಟಿಸ್ ಡಿಲೈಡ್, ಜಸ್ಟಿಸ್ ದಡಿನೈಡ್ ಎಂಬ ಮಾತಿದೆ. ಅದನ್ನೇ ಈ ಸಿನಿಮಾಕ್ಕೆ ಆಧಾರವಾಗಿಟ್ಟುಕೊಂಡು ಜನಪ್ರಿಯ ನಟ ಎಡಕಲ್ಲು ಗುಡ್ಡ ಚಂದ್ರಶೇಖರ್ ಅವರು ನಿರ್ದೇಶನ ಮಾಡಿರುವ ಚಿತ್ರ. ಸುಂದರ್ ರಾಜ್ ಅವರ ಕಥೆ, ವಾಸುವೀ ಪ್ರೊಡಕ್ಷನ್ ಅಡಿಯಲ್ಲಿ ಶ್ರೀಮತಿ ಮಮತ ಸುಂದರ್ ರಾಜ್ ಹಾಡು ಎಂ ಡಿ ಸುಂದರ್ ರಾಜ್ ನಿರ್ಮಾಣದ ಚಿತ್ರ.
ಈ ಹಿಂದೆ ಎಡಕಲ್ಲು ಗುಡ್ಡ ಚಂದ್ರಶೇಖರ್ ಅವರು ‘ಪೂರ್ವಾಪರ’ (ಎಂ ಕೆ ಇಂದಿರ ಕಾದಂಬರಿ) ಸಿನಿಮಾ ನಿರ್ದೇಶನ ಮಾಡಿದ್ದರು. ಎಡಕಲ್ಲು ಚಂದ್ರಶೇಖರ್ ಅವರೇ ಚಿತ್ರಕಥೆ ರಚಿಸಿದ್ದಾರೆ. ಬಿದರಳ್ಳಿ ವಾಸು ಅವರ ಸಂಭಾಷಣೆ ಬರೆದಿದ್ದಾರೆ.
ನಿಧಾನಗತಿಯ ತೀರ್ಪಿನ ಬಗ್ಗೆ ಪ್ರಸ್ತಾಪ ಅಲ್ಲದೆ, ರೈತರ ಸಮಸ್ಯೆ, ಹೆಣ್ಣಿನ ಮೇಲಿನ ದೌರ್ಜನ್ಯ ಹಾಗೂ ಡ್ರಗ್ ಅಬ್ಯುಸ್ ಬಗ್ಗೆ ಕೆಂಪಮ್ಮನ ಕೋರ್ಟ್ ಕೇಸ್ ಸಿನಿಮಾದಲ್ಲಿ ಪ್ರಸ್ತಾಪ ಇದೆ. ರಾಜ್ ರುಮಾಲಿ ಅವರ ಛಾಯಾಗ್ರಹಣ, ಹಿರಿಯ ಛಾಯಾಗ್ರಾಹಕ ಬಿ ಎಸ್ ಬಸವರಾಜ್ ಅವರ ನೆರವು, ಸುರೇಶ್ ಅರಸ್ ಅವರ ಸಂಕಲನ, ಶ್ರೀಧರ್ ಸಂಭ್ರಮ್ ಅವರ ಸಂಗೀತ ಇದೆ. ಕೆಂಪಮ್ಮನ ಕೋರ್ಟ್ ಕೇಸ್ ಚಿತ್ರವು ಈ ವಾರ ತೆರೆ ಕಾಣಲಿದೆ.
0 ಪ್ರತಿಕ್ರಿಯೆಗಳು