ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂಸೊಂದು ಕೂಗೀತೆಂದು..

 

 

ಎಪ್ಪತ್ತಾದರೂ ಯಾಕೆ ತುಂಬಿದವೊ???

ಭುವಿ

 

 

 

 

ಮಾತುಬಾರದ
ದೇವರುಗಳಿದ್ದರೆ
ಹೀಗೇ ಇಲ್ಲಿ,
ಹೂವ ಹಾಸಿನ ಮೇಲೆಯೇ
ಮೊಳೆಗಳ ಹೊಡೆಯುತ್ತಾರೆ
ಛೀ…..
ಯಾವ ಕಟಕಟೆಯಲ್ಲೂ
ಈ ಉಸಿರ ವ್ಯಾಪಾರ
ನ್ಯಾಯದ ಕಣ್ಣು
ತೆರೆಸಲಿಕ್ಕಿಲ್ಲ
…………….
ಚರಿತ್ರೆಯಲ್ಲೂ
……………….
ಎಪ್ಪತ್ತಾದರೂ
ಯಾಕೆ ತುಂಬಿದವೊ??
ಬರೊಬ್ಬರಿ ಎಪ್ಪತ್ತು
ಬಲಿಹಾರವೇ!!!

ಕೂಸೊಂದು
ಕೂಗೀತೆಂದು
ಆರ್ತಳಾಗಿ ಒರಗಿದ್ದಾಳೆ
ಬುದ್ಧಿಭ್ರಮೆಯಾದ
ಭರವಸೆಯ ಗೋಡೆಗೆ,
ಮತ್ತೆಂದೂ ಚೇತರಿಕೆ
ಇಣುಕದ
ಬೆಂಡೆ ಹೂವಿನಂತೆ;

ನಿಯಮವಿದೆ
ಸೂತಕಗಳ
ಕಲನ ಮಾಡದೆ
ಬಾವುಟ ಪೂರ್ತಿಯಾಗಿ
ತುದಿ ಮುಟ್ಟಲೇಬೇಕಂತೆ,,!
ಉಸಿರ ಕೊಂಡುಕೊಡದ
ಅರಾಜನೊಬ್ಬ
ನೆಗದು ಬಿದ್ದಿದ್ದರೆ?!!

‍ಲೇಖಕರು avadhi

16 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading