ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಅವರಿಗೆ ನೀವೇ ಜಡ್ಜ್..

ಕುಂ ವೀ ಅವರ ಹೊಸ ಕಾದಂಬರಿ ಸಧ್ಯದಲ್ಲೇ ಬೆಳಕು ಕಾಣಲಿದೆ. ಆದರೆ ಸಮಸ್ಯೆಯೊಂದು ಎದುರಾಗಿದೆ 

ಅರುಣ್ ಕುಮಾರ್ ಗೆ ಮುಖಪುಟ ಮಾಡಲು ಕೊಟ್ಟಿದ್ದಾರೆ 

ಅವರು ಯಥಾಪ್ರಕಾರ ಒಂದು ಕೇಳಿದರೆ ನಾಲ್ಕಾರು ಕವರ್ ಮುಂದಿಟ್ಟಿದ್ದಾರೆ 

ಆದರಲ್ಲಿ ಮೂರು ನಿಮ್ಮ ಮುಂದಿದೆ 

ಎಲ್ಲವೂ ಚೆನ್ನಾಗಿದೆ ಏನು ಮಾಡೋದು ಎನ್ನುವುದೇ ಸಮಸ್ಯೆ 

ಹಾಗಾಗಿ ಕುಂ ವೀ ನಿಮ್ಮನ್ನೇ ಕೇಳುತ್ತಿದ್ದಾರೆ ‘ಯಾರು ಹಿತವರು ನಿಮಗೆ ಈ ಮೂವರೊಳಗೆ?’ 

kum vee book nijalinga3

kum vee Nijalinga-2

kum vee book nijalinga1

‍ಲೇಖಕರು Admin

12 July, 2016

9 Comments

  1. kvtirumalesh

    ನಾಲ್ಕಿಲ್ಲ, ಇರೋದು ಮೂರೇ! (ನಾಲ್ಕನೇ ಆಯಾಮ ಮಾಯ, ಅದೆಂದೂ ಕಣ್ಣಿಗೆ ಕಾಣಿಸದು!) ಇವುಗಳಲ್ಲಿ ಚಲೋ ಅನಿಸುವುದು ಮೊದಲನೇದು–ಯಾರನ್ನು ಕೇಳಿದರೂ ಹೇಳ್ತಾರೆ. ಕುಂ.ವಿ. ಕೃತಿಗೆ ಮತ್ತು ಅರುಣ್ ಅವರ ಚಿತ್ರಕ್ಕೆ ಶುಭವಾಗಲಿ!
    ಕೆ.ವಿ. ತಿರುಮಲೇಶ್

  2. Sharanabasava

    ಮೊದಲನೆಯದು ಸೂಕ್ತ

  3. Anonymous

    modalaneyadu

  4. kumbar Veerabhadrappa

    ನಮ್ಮೆಲ್ಲರ ಮೆಚ್ಚಿನ ಲೇಖಕ ತಿರುಮಲೇಶ್ ಅವರ ಅಭಿಪ್ರಾಯ ತಿಳದ ಬಳಿಕ! ನಮ್ಮ ಈ ತಿರುಮಲೇಶ್ ಬಂಡಾಯ ಹಾಗೂ ನವ್ಯ ವಸಾಹತುಶಾಹಿ ಜಗಳದ ನಡುವೆ (ಕೋಣನೆರಡುಂ ಹೋರೆ ಗಿಡುವಿಂಗೆ ಮೃತ್ಯು) ಕಟ್ಟಾ ಎಡಪಂಥೀಯ ಚಿಂತಕರಿಂದ ಹಲ್ಲೆಗೊಳಗಾದವರು, ಅವರು ಯಾವ ಜಾತಿ? ಗೊತ್ತೇ ಇಲ್ಲ ಇದುವರೆಗೆ, ನನಗೆ ಇಷ್ಟವಾದ ಬರಹಗಾರ.ಅಲೆಮಾರಿಯಾಗಿರುವ ಕಾರಣ ಸಹ ಹೌದು,ಇವರಿಗೆ ನಾವೆಲ್ಲ ಇದ್ದಾಗಲೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲೇ ಬೇಕಿತ್ತು,ಕನ್ನಡ ಸಾಹಿತ್ಯದ ದುರಾದೃಷ್ಟವಶಾತ್ ಜ್ನಾನಪೀಠಿ ಹಠದಿಂದ ಅದು ನೆರವೇರಲಿಲ್ಲ, ಅಂತೂ ಬಂತಲ್ಲ, ಅದೇ ಸಮಾಧಾನ, ಈ ಗ್ರೇಟ್ ಕಾದಂಬರಿ ಓದಿದ ಬಳಿಕ!

  5. Anonymous

    ಮೊದಲಿನದು ಸೂಕ್ತವಾಗಿದೆ. ಎರಡನೆಯದು ಸುಂದರ

  6. Pradeep

    First one

  7. Sangeeta Kalmane

    ಎರಡನೆಯದು. ಏಕೆ ಗೊತ್ತಾ? ಸಾಮಾನ್ಯವಾಗಿ ಮನುಷ್ಯನಿಗೆ ಎರಡು ಮುಖ. ಒಳಗೊಂದು ಹೊರಗೊಂದು. ಆದರೆ ಕಾದಂಬರಿ ಕಥೆ ಓದಿದಾಗ ಮಾತ್ರ ಮುಖಪುಟ ನಿಖರವಾಗಿ ನಿಧ೯ರಿಸಲು ಸಾಧ್ಯ.

  8. rakesh reddy

    Modalaneya du tumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading